Select Your Language

Notifications

webdunia
webdunia
webdunia
webdunia

ಎಬಿಸಿ ವಲಯ ವಿಂಗಡಣೆ: ಶಿಕ್ಷಕರ ವರ್ಗಾವಣೆ ಶೀಘ್ರ ಎಂದ ಸಚಿವ

ಎಬಿಸಿ ವಲಯ ವಿಂಗಡಣೆ: ಶಿಕ್ಷಕರ ವರ್ಗಾವಣೆ ಶೀಘ್ರ ಎಂದ ಸಚಿವ
ಮೈಸೂರು , ಸೋಮವಾರ, 1 ಅಕ್ಟೋಬರ್ 2018 (19:26 IST)
ಚುನಾವಣೆ ಮುಗಿದು ಫಲಿತಾಂಶ ಬಂದು, ಮೈತ್ರಿ ಸರಕಾರ ರಚನೆಯಾಗಿ ತಿಂಗಳುಗಳು ಕಳೆದ ಮೇಲೆ ಇದೀಗ ಸರಕಾರಿ ಶಾಲಾ ಶಿಕ್ಷಕರ ವರ್ಗಾವಣೆಗೆ ಸರಕಾರ ಕೊನೆಗೂ ಮುಂದಾಗಿದೆ.

ಗ್ರಾಮಾಂತರ ಪ್ರದೇಶದಿಂದ ನಗರ ಪ್ರದೇಶಕ್ಕೆ, ನಗರ ಪ್ರದೇಶದ ಶಿಕ್ಷಕರನ್ನು ಗ್ರಾಮಾಂತರ ಪ್ರದೇಶಕ್ಕೆ ವರ್ಗಾವಣೆ ಮಾಡಲು ರಾಜ್ಯ ಸರಕಾರ ನಿರ್ಧಾರ ಮಾಡಿದೆ. ಎ ಬಿ ಮತ್ತು ಸಿ ವಲಯಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಶಿಕ್ಷಕರನ್ನು ವರ್ಗಾವಣೆ ಮಾಡಲು ನಿರ್ಧಾರ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿಯೂ ಇದೇ ನಿಯಮ ಅನ್ವಯ ಆಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಹೆಚ್ಚುವರಿ ಶಿಕ್ಷಕರನ್ನು ವರ್ಗಾವಣೆ ಮಾಡಲಾಗುತ್ತದೆ. ಕಡ್ಡಾಯ ಶಿಕ್ಷಕರ ವರ್ಗಾವಣೆ ಬಳಿಕವಷ್ಟೇ ಕೋರಿಕೆ ವರ್ಗಾವಣೆ ನಡೆಯಲಿದೆ ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ದಲೈಲಾಮ ಹತ್ಯೆ ಸಂಚು: ಮಾಜಿ ಸಿಎಂ ಖಂಡನೆ