Publish Date: Sun, 30 Sep 2018 (18:50 IST)
Updated Date: Sun, 30 Sep 2018 (18:58 IST)
ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರದಲ್ಲಿ ತೊಂದರೆ ಏನೂ ಇಲ್ಲ ಎಂದು ಎಂ ಎಲ್ ಸಿ ಹೇಳಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ ಎಂದು ನೆಲಮಂಗಲ ಸಮೀಪದ ವೀರಾಪುರದಲ್ಲಿ ಎಂ.ಎಲ್.ಸಿ ಹೆಚ್.ಎಂ ರೇವಣ್ಣ ಹೇಳಿಕೆ ನೀಡಿದ್ದಾರೆ.
ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗಳ ಜನ್ಮಸ್ಥಳವಾಗಿರುವ ವೀರಾಪುರದಲ್ಲಿ ಹೇಳಿಕೆ ನೀಡಿರುವ ಅವರು, ಬಿಬಿಎಂಪಿಯಲ್ಲಿ ಆಪರೇಷನ್ ಕಮಲದ ವಿಚಾರದ ಕುರಿತೂ ಮಾತನಾಡಿದ್ದಾರೆ. ಆಪರೇಷನ್ ಕಮಲವನ್ನ ಪ್ರಾರಂಭ ಮಾಡಿದ್ದೇ ಬಿಜೆಪಿಯವರು. ಬಿಬಿಎಂಪಿ ಚುನಾವಣೆಯಲ್ಲಿ ದೋಸ್ತಿ ಸರ್ಕಾರ ಜಯಗಳಿಸಿದೆ ಎಂದರು.
ನಾನು ಲೋಕಸಭಾ ಚುನಾವಣೆಯ ಆಕಾಂಕ್ಷಿಯಲ್ಲ ಎಂದ ಹೆಚ್.ಎಂ.ರೇವಣ್ಣ, ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡಲಿದೆ. ನನಗೆ ಚೆನ್ನಪಟ್ಟಣ ಬೇಕಿರಲಿಲ್ಲ, ನನ್ನನು ಅಲ್ಲಿಗೆ ಕಳುಹಿಸಿದ್ರು. ನಾನು ಮುಖಂಡನಲ್ಲ, ಪಕ್ಷದ ನಿಷ್ಟಾವಂತ ಕಾರ್ಯಕರ್ತ ಎಂದು ಹೇಳಿದರು.