Select Your Language

Notifications

webdunia
webdunia
webdunia
webdunia

ದಲೈಲಾಮ ಹತ್ಯೆ ಸಂಚು: ಮಾಜಿ ಸಿಎಂ ಖಂಡನೆ

ದಲೈಲಾಮ ಹತ್ಯೆ ಸಂಚು: ಮಾಜಿ ಸಿಎಂ ಖಂಡನೆ
ಹುಬ್ಬಳ್ಳಿ , ಸೋಮವಾರ, 1 ಅಕ್ಟೋಬರ್ 2018 (19:19 IST)
ರಾಜ್ಯದ ಗುಪ್ತಚರ ಇಲಾಖೆಯು ಬೌದ್ಧ ಧರ್ಮದ ಗುರು ದಲೈಲಾಮ ಹತ್ಯೆ ಸಂಚನ್ನು ಬಯಲಿಗೆ ಎಳೆಯುವಲ್ಲಿ ವಿಫಲವಾಗಿದೆ ಎಂದು ಮಾಜಿ ಸಿಎಂ ದೂರಿದ್ದಾರೆ.

ಜೆ.ಬಿ.ಎಂ ಸಂಘಟನೆ ಸದಸ್ಯರು ರೂಪಿಸಿರುವ ಬೌದ್ಧ ಧರ್ಮಗುರು ದಲೈಲಾಮ ಹತ್ಯೆ ಸಂಚಿನ ವಿಷಯದಲ್ಲಿ ರಾಜ್ಯದ ಗುಪ್ತಚರ ಇಲಾಖೆ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ದೂರಿದ್ದಾರೆ.

ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಗುರು ದಲೈಲಾಮ ಅವರ ಕೊಲೆಗೆ ಉಗ್ರಗಾಮಿಗಳು ಸಂಚು ರೂಪಿಸಿರುವುದನ್ನು ಖಂಡಿಸುವುದಾಗಿ ತಿಳಿಸಿದರು.

ರಾಜ್ಯದ ಸರಕಾರ ಈ ಹತ್ಯೆ ಯತ್ನ ಪ್ರಕರಣದಲ್ಲಿ ಸಕ್ರಿಯವಾಗಬೇಕು. ಈ ಕುರಿತು ಸಮರ್ಪಕವಾದ ತನಿಖೆ ಆಗಬೇಕೆಂದು ಜಗದೀಶ್ ಶೆಟ್ಟರ್ ಒತ್ತಾಯಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಅ.10ರಂದು ಸಚಿವ ಸಂಪುಟ ವಿಸ್ತರಣೆ