Select Your Language

Notifications

webdunia
webdunia
webdunia
webdunia

ಮುರುಘಾಶ್ರೀ ಮತ್ತು ಬಸವರಾಜ್ ನಡುವಿನ ಸಭೆ..! ಸಭೆಯ ಬಳಿಕ ಏನಾಯ್ತು ಗೊತ್ತಾ?

ಮುರುಘಾಶ್ರೀ ಮತ್ತು ಬಸವರಾಜ್ ನಡುವಿನ ಸಭೆ..! ಸಭೆಯ ಬಳಿಕ ಏನಾಯ್ತು ಗೊತ್ತಾ?
ಚಿತ್ರದುರ್ಗ , ಭಾನುವಾರ, 28 ಆಗಸ್ಟ್ 2022 (14:18 IST)
ಮುರುಘಾಶ್ರೀಗಳ ವಿರುದ್ಧ ಫೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗಿನ ಜಾವದವರೆಗೂ ಸಭೆ ನಡೆದಿದೆ. ಚಿತ್ರದುರ್ಗ ಬಳಿಯ ಗ್ರಾಮವೊಂದರಲ್ಲಿ ಸಭೆ ನಡೆದಿದ್ದು, ಮುರುಘಾಶ್ರೀ, ಬಸವರಾಜನ್ ನೇರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಮಠದ ಆಡಳಿತಾಧಿಕಾರಿಯಾಗಿ ಬಸವರಾಜನ್ ಮುಂದುವರಿಕೆಗೆ ಚಿಂತನೆ ನಡೆದಿದೆ. ಈ ಮೂಲಕ ಮುರುಘಾ ಶ್ರೀ, ಬಸವರಾಜನ್ ನಡುವಿನ ಸಭೆ ಯಶಸ್ವಿಯಾಗಿದೆ ಎಂಬ ಮಾಹಿತಿ ದೊರಕಿದೆ. ಮಠಾಧೀಶರು, ಮುಖಂಡರು  ಈ ಸಭೆಯಲ್ಲಿ ಭಾಗಿಯಾಗಿದ್ದರು. ಇತ್ತ ತಮ್ಮ ಮೇಲಿನ ಲೈಂಗಿಕ ಆರೋಪದ ಬಗ್ಗೆ ಶ್ರೀಗಳು ಮಾತಾಡಿದ್ದು, ನಮ್ಮ ಪಕ್ಕದಲ್ಲೇ ಇದ್ದು ಹೋದವರೇ ಪಿತೂರಿ, ಒಳಸಂಚು ಮಾಡಿದ್ದಾರೆ. ಯಾವ ಸಮಸ್ಯೆ, ಆರೋಪ ಶಾಶ್ವತ ಅಲ್ಲ. ಇದು ಮುರುಘಾ ಶರಣರ ಅಭಿಮಾನವನ್ನು ಹಾಳು ಮಾಡುವ ಕೆಲಸವಾಗಿದೆ. ಮೇಲೆಕ್ಕೆ ಹೋದಂತೆಲ್ಲ ಆಪತ್ತುಗಳು, ಕಿರುಕುಳಗಳು ಇರ್ತಾವೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗುಲಾಂ ನಬೀ ಆಜಾದ್ ವಿರುದ್ಧ ಸಿದ್ದು ಟ್ವೀಟ್