Publish Date: Wed, 17 Aug 2022 (11:41 IST)
Updated Date: Wed, 17 Aug 2022 (11:43 IST)
ಬೆಂಗಳೂರು : ರಾಜ್ಯ ಕಾಂಗ್ರೆಸ್ ನಾಯಕರಿಗೆ ನಾರ್ಥ್-ಸೌಥ್ ಸ್ಟ್ರಾಟಜಿ ಕಿರಿಕಿರಿ ಎದುರಾಯ್ತಾ ಅನ್ನೋ ಪ್ರಶ್ನೆ ಎದ್ದಿದೆ.
ರಾಹುಲ್ ಗಾಂಧಿಯ ಸ್ಟ್ರಾಟಜಿ ಟೀಂ ಕಿರಿಕಿರಿಗೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ಬೇಸರ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿಯೊಂದು ಲಭ್ಯವಾಗಿದೆ.
ಚುನಾವಣಾ ಸಿದ್ಧತೆಯ ಪ್ರತಿಸಭೆಗೂ ಎಐಸಿಸಿ ಸ್ಟ್ರಾಟಜಿ ಟೀಮ್ ಜೊತೆಗಿಟ್ಟುಕೊಳ್ಳಲು ಎಐಸಿಸಿ ಸೂಚಿಸಿದ್ಯಂತೆ. ಆದರೆ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಲೆಕ್ಕಾಚಾರಗಳೇ ಬೇರೆ. ರಾಜ್ಯದ ಮಟ್ಟಿಗೆ ಪಕ್ಷದ ಸಭೆಯಲ್ಲಿ ಹೊರಗಿನ ಹಸ್ತಕ್ಷೇಪ ಬೇಡ ಎಂದು ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರು ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗುತ್ತಿದೆ.
ರಾಹುಲ್ ಹೇಳಿದ್ದಾರೆ ಎಐಸಿಸಿ ಸ್ಟ್ರಾಟಜಿ ಟೀಂ ಜೊತೆಗೆ ಮುಂದುವರಿಯುವಂತೆ ಸುರ್ಜೆವಾಲ ಸಹ ನಿನ್ನೆಯ ಸಭೆಯಲ್ಲಿ ಸೂಚಿಸಿದ್ದಾರೆ.