Publish Date: Tue, 02 Jul 2019 (16:02 IST)
Updated Date: Tue, 02 Jul 2019 (16:04 IST)
ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ವಿವಾಹಿತೆಯನ್ನು ಬೇರೊಬ್ಬ ಮದುವೆಯಾಗಿ ಪುಸಲಾಯಿಸಿ ಕರೆದುಕೊಂಡು ಬಂದು ಕೈ ಬಿಟ್ಟ ಹಿನ್ನೆಲೆಯಲ್ಲಿ ಆಕೆ ಇಂಥಾ ಕೆಲಸ ಮಾಡಿದ್ದಾಳೆ.
ವಿವಾಹಿತ ಮಹಿಳೆಯೊಬ್ಬಳು ಪ್ರಿಯಕರನ ಮನೆಮುಂದೆ ಧರಣಿ ಕುಳಿತಿದ್ದಾಳೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಿಯ್ಯಾಪುರ ಗ್ರಾಮದ ಹುಲಿಗೆಮ್ಮ ಎಂಬುವರನ್ನು ಯಾದಗಿರಿಯ ಕಾಲೂಜುರ ಗ್ರಾಮದ ವ್ಯಕ್ತಿಯೊಂದಿಗೆ ಮದುವೆಮಾಡಿಕೊಡಲಾಗಿತ್ತು.
ಆದರೆ ಚಿಕ್ಕಬೂದೂರು ಗ್ರಾಮದ ರಾಜಶೇಖರ ಗೌಡ ಎಂಬಾತ ಹುಲಿಗೆಮ್ಮಳನ್ನು ಮದುವೆಯಾಗುವುದಾಗಿ ನಂಬಿಸಿ ಕರೆ ತಂದಿದ್ದನು. ಆ ಬಳಿಕ ಕೈ ಕೊಟ್ಟು ಓಡಿಹೋಗಿದ್ದಾನೆ.
ಮದುವೆಯಾಗುವುದಾಗಿ ನಂಬಿಸಿ ಪರಾರಿಯಾಗಿರುವ ರಾಜಶೇಖರಗೌಡನ ಮನೆ ಮುಂದೆ ವಿವಾಹಿತೆ ಧರಣಿ ನಡೆಸುತ್ತಿದ್ದಾಳೆ. ರಾಜಶೇಖರ ಗೌಡನನ್ನೇ ಮದುವೆ ಆಗ್ತೀನಿ ಅಂತ ಮಹಿಳೆ ಪಟ್ಟು ಹಿಡಿದಿದ್ದಾಳೆ.