Select Your Language

Notifications

webdunia
webdunia
webdunia
webdunia

ಮಂಡ್ಯ ಬಸ್ ದುರಂತ: ಎಂಟು ಮಂದಿಯ ಅಂತ್ಯಸಂಸ್ಕಾರ

ಮಂಡ್ಯ ಬಸ್ ದುರಂತ: ಎಂಟು ಮಂದಿಯ ಅಂತ್ಯಸಂಸ್ಕಾರ
ಮಂಡ್ಯ , ಸೋಮವಾರ, 26 ನವೆಂಬರ್ 2018 (09:19 IST)
ಮಂಡ್ಯ: ಶನಿವಾರ ಕನಗನಮರಡಿ ಗ್ರಾಮದಲ್ಲಿ ಖಾಸಗಿ ಬಸ್ ನಾಲೆಗೆ ಉರುಳಿ 30 ಮಂದಿ ಸಾವನ್ನಪ್ಪಿದ ಪ್ರಕರಣದಲ್ಲಿ ವದೇಸಮುದ್ರ ಗ್ರಾಮದ ಎಂಟು ಮಂದಿ ಶವ ಸಂಸ್ಕಾರ ನಿನ್ನೆ ನೆರವೇರಿತು.

ದುರಂತದಲ್ಲಿ ಸಾವನ್ನಪ್ಪಿದವರಲ್ಲಿ ವದೇಸಮುದ್ರ ಗ್ರಾಮದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈ ಪೈಕಿ ಎಂಟು ಮಂದಿಯ ಅಂತ್ಯಸಂಸ್ಕಾರವನ್ನು ನಿನ್ನೆ ಸಾರ್ವಜನಿಕ ರುದ್ರಭೂಮಿಯಲ್ಲಿ ಸಾಮೂಹಿಕವಾಗಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು.

ಶನಿವಾರ ರಾಜಕುಮಾರ ಹೆಸರಿನ ಖಾಸಗಿ ಬಸ್ ಕನಗನಮರಡಿ ಬಳಿ ಕಾವೇರಿ ನಾಲೆಗೆ ಉರುಳಿ ಬಿದ್ದು 30 ಮಂದಿ ಜಲಸಮಾಧಿಯಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಸಿಗುತ್ತಾ ಅಪ್ಪಾಜಿ ಅಂಬರೀಶ್ ಅಂತಿಮ ದರ್ಶನ ಭಾಗ್ಯ?!