Select Your Language

Notifications

webdunia
webdunia
webdunia
webdunia

ಕೋಟಿ ಲೂಟಿ ಮ್ಯಾನೇಜರ್ ಅಂದರ್..!!

ಕೋಟಿ ಲೂಟಿ ಮ್ಯಾನೇಜರ್ ಅಂದರ್..!!
ಬೆಂಗಳೂರು , ಮಂಗಳವಾರ, 20 ಸೆಪ್ಟಂಬರ್ 2022 (16:39 IST)
ಬ್ಯಾಂಕ್ ಆಫ್ ಬರೋಡಾದಲ್ಲಿ ವಂಚನೆ ಮಾಡಿದ್ದ ಆರೋಪಿಯನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
 
ಬ್ಯಾಂಕ್ ನಲ್ಲಿ ಸಹಾಯಕ ವ್ಯವಸ್ಥಾಪಕನಾಗಿದ್ದ ಆಂದ್ರ ಪ್ರದೇಶದ ಕುಮಾರ ಬೋನಾಲ ಕೃಷ್ಣಮೂರ್ತಿ ಬೋನಾಲ ಬಂಧಿತನಾಗಿದ್ದು, ಹುಬ್ಬಳ್ಳಿಯಲ್ಲಿ ವಶಕ್ಕೆ ಪಡೆಯಲಾಗಿದೆ.
ಬ್ಯಾಂಕ್ ಆಫ್ ಬರೋಡಾ ಯಲ್ಲಾಪುರ ಶಾಖೆಯಿಂದ ಪತ್ನಿಯ ಖಾತೆಗೆ 26,99,5000 ರೂ. ವರ್ಗಾವಣೆ ಮಾಡಿಕೊಂಡು ಬ್ಯಾಂಕ್‌ಗೆ ಮೋಸ ಮಾಡಿ ನಂಚಿಕೆದ್ರೋಹ ಮಾಡಿರುವ ಬಗ್ಗೆ ವ್ಯವಸ್ಥಾಪಕ ವಿಘ್ನೇಶ್ವರ ಭಟ್ ದೂರು ನೀಡಿದ್ದರು.
 
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂಗಿ-ಬನಿಯನ್ ತೆಗೆದು ಒಳಗೆ ಪ್ರವೇಶ ಮಾಡಿ ನಾಮಫಲಕಕ್ಕೆ ಬ್ರೇಕ್ ಸಾಧ್ಯತೆ