Select Your Language

Notifications

webdunia
webdunia
webdunia
webdunia

ಬೆಂಗಳೂರಿನ ಪ್ರಮುಖ ಅಂಡರ್ ಪಾಸ್ ಗಳು ಬಂದ್- ತುಷಾರ್ ಗಿರಿನಾಥ್

Major underpasses of Bangalore are Bandh
bangalore , ಸೋಮವಾರ, 22 ಮೇ 2023 (16:19 IST)
ಕೆ.ಆರ್ ಸರ್ಕಲ್ ನಲ್ಲಿರುವ ಅಂಡರ್ ಪಾಸ್ ಕೆಲ ಹೊತ್ತಿನಲ್ಲಿ ಬಂದ್ ಆಗಲಿದೆ.ಮಳೆಗಾಲ ಮುಗಿಯೋವರೆಗೂ ಕೆಲ ಅಂಡರ್ ಪಾಸ್ ಗಳನ್ನು ತಾತ್ಕಾಲಿಕವಾಗಿ ಪಾಲಿಕೆ ಮುಚ್ಚಲಿದೆ.ಇಂಜಿನಿಯರ್ ಇನ್ ಚೀಫ್ ವರದಿ ಆಧರಿಸಿ ಯಾವ್ಯಾವ ಅಂಡರ್ ಪಾಸ್ ಬಂದ್ ಎಂದು ಬಿಬಿಎಂಪಿ ನಿರ್ಧರಿಸಲಿದೆ.ಈಗಾಗಲೇ ನಗರದ ಹಲವು ಅಂಡರ್ ಪಾಸ್ ಗಳಲ್ಲಿ ಮಳೆ ನೀರು ನಿಂತು ಅವಾಂತರವಾಗಿದೆ.ಹೀಗಾಗಿ ಮಳೆಗಾಲ ಮುಗಿಯೋವರೆಗೂ ಕೆಲ ಅಂಡರ್ ಪಾಸ್ ಗಳನ್ನ  ಬಿಬಿಎಂಪಿ ಮುಚ್ಚಲಿದೆ ಎಂದು ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.
 
ಈ ವೇಳೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರವರು ನಿನ್ನೆ ಸಾವಿಗೀಡಾದ ಇಬ್ಬರಿಗೂ 5 ಲಕ್ಷ ಪರಿಹಾರ ನೀಡಲಾಗುವುದು.ಮಹಾಲಕ್ಷ್ಮಿ ಲೇಔಟ್ ನಲ್ಲಿ ರಾಜಕಾಲೂವೆ ಕೆಲಸ ನಡೆಯುತ್ತಿದ್ದ ಹಿನ್ನೆಲೆ  20 ಮನೆ ಗೆ ನೀರು ನುಗ್ಗಿದೆ.ಕೆಆರ್  ಸರ್ಕಲ್ ಅಂಡರ್ ಪಾಸ್ ನಲ್ಲಿ ಒಂದು ಅವಘಡಾ ನಡೆದಿದೆ.ಚಂಡ ಮಾರುತದಿಂದ ಎಲೆಗಳು ಉದುರಿದ್ದು 30 ರಿಂದ 40 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬಂದಿದೆ.ಹಾಗಾಗಿ ಎಲೆಗಳು ಉದುರಿ ಅಂಡರ್ ಪಾಸ್ ನಲ್ಲಿ ನೀರುಹೋಗುವ ಸ್ಥಳಗಳು ಬಂದ್ ಆಗಿ ಅನಾಹುತ ನಡೆದಿದೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

200 ಯೂನಿಟ್ ಗೆ ವಿದ್ಯುತ್ ಗೆ ಯಾರು ಹಣ ಪಾವತಿಸುವುದು ಬೇಡ-ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ