Select Your Language

Notifications

webdunia
webdunia
webdunia
webdunia

ಡಾ. ರಾಜ್ ಕುಟುಂಬದಲ್ಲಿ ಹುಳಿ ಹಿಂಡುವ ಆರೋಪ ಹೊರಿಸಿದ್ದಕ್ಕೆ ಮಧು ಬಂಗಾರಪ್ಪ ತಿರುಗೇಟು

ಡಾ. ರಾಜ್ ಕುಮಾರ್
ಬೆಂಗಳೂರು , ಗುರುವಾರ, 29 ಮಾರ್ಚ್ 2018 (14:08 IST)
ಬೆಂಗಳೂರು: ಡಾ. ರಾಜ್ ಕುಟಂಬದ ಮಧ್ಯೆಯೇ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ ಎಂಬ ಸಹೋದರ ಕುಮಾರ್ ಬಂಗಾರಪ್ಪ ಆರೋಪಕ್ಕೆ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕುಮಾರ್ ಬಂಗಾರಪ್ಪ ಒಗ್ಗಟ್ಟಿನಲ್ಲಿ ನಂಬಿಕೆ ಇರಿಸಿದ ಡಾ. ರಾಜ್ ಕುಟುಂಬದ ಮಧ್ಯೆ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಬಂಗಾರಪ್ಪ ಹೆಸರು ಹೇಳಿಕೊಂಡು ಮತ ಕೇಳುತ್ತಿದ್ದಾರೆ ಎಂದು ಸಹೋದರ ಮಧು ಬಂಗಾರಪ್ಪ ಮತ್ತು ಸಹೋದರಿ ಗೀತಾ ಶಿವರಾಜ್ ಕುಮಾರ್ ಮೇಲೆ ಆರೋಪ ಮಾಡಿದ್ದರು.

ಇಂದು ಇದಕ್ಕೆ ತಿರುಗೇಟು ನೀಡಿರುವ ಮಧು ಬಂಗಾರಪ್ಪ, ‘ವೀರಪ್ಪನ್ ಗೆ ಅಮವಾಸ್ಯೆ ಹುಣ್ಣಿಮೆಗೆ ತಲೆಕೆಡುತ್ತಿತ್ತು. ಅದೇ ರೀತಿ ಕುಮಾರ್ ಬಂಗಾರಪ್ಪಗೆ ಚುನಾವಣೆ ಬಂದಾಗ ತಲೆಕೆಡುತ್ತೆ. ಸುಳ್ಳಿನ ಕಂತೆ ಬಿಡುತ್ತಿದ್ದಾನೆ’ ಎಂದು ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯರಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಪ್ಲ್ಯಾನ್