Publish Date: Sun, 07 May 2023 (19:00 IST)
Updated Date: Sun, 07 May 2023 (18:39 IST)
ವಿಜಯನಗರದ ಕಾಂಗ್ರೆಸ್ ಅಭ್ಯರ್ಥಿ ಎಂ.ಕೃಷ್ಣಪ್ಪ ಮತಬೇಟೆ ಇಂದೂ ಸಹ ಮುಂದುವರೆದಿದೆ. ವಿಜಯನಗರದ ಮಾಗಡಿ ರಸ್ತೆಯ ಹೊಸಹಳ್ಳಿ ಪೈಪ್ ಲೈನ್ ಬಳಿ ಬೃಹತ್ ರೋಡ್ ಶೋ ಮೂಲಕ ಎಂ ಕೃಷ್ಣಪ್ಪ ಮತಯಾಚನೆ ಮಾಡಿದ್ರು. ಬಳಿಕ ಮಾತನಾಡಿದ ಅವರು,ಬೆಳಗ್ಗೆಯಿಂದ ಎಲ್ಲಾ ಕಡೆ ಪ್ರಚಾರ ಮಾಡ್ತಿದ್ದಿವಿ..ನಾಳೆ ನಮ್ಮ ಕ್ಷೇತ್ರಕ್ಕೆ ಪ್ರಿಯಾಂಕ ಗಾಂಧಿ ಬರ್ತಿದ್ದಾರೆ.ನಮ್ಮ ಕಾರ್ಯಕರ್ತರು ಬರ್ತಾರೆ.ಎಲ್ಲರು ಸೇರಿ ಕಾರ್ಯಕ್ರಮ ಮಾಡ್ತಿವಿ.ಜನ ಈ ಸರ್ಕಾರದಿಂದ ರೋಸಿಹೋಗಿದ್ದಾರೆ, ನಮ್ಮನ್ನ ನೋಡಿದ ತಕ್ಷಣ ಪ್ರೀತಿ ವಿಶ್ವಾಸದಿಂದ ಮಾತಾಡುಸ್ತಾರೆ.ಕಾಂಗ್ರೆಸ್ ಆಡಳಿತಕ್ಕೆ ಬರಬೇಕು, ಭ್ರಷ್ಟ ಸರ್ಕಾರ ಹೋಗಬೇಕು..ಬಡವರ ಕಷ್ಟ ಇವರಿಗೆ ಗೊತ್ತಿಲ್ಲಾ,ಕಷ್ಟ ಸುಖದಲ್ಲಿ ಆಗೊಲ್ಲಾ.ಅಕ್ರಮವಾಗಿ ಬಂದಿದ್ದಾರೆ ಅನೈತಿಕವಾಗಿ ಸರ್ಕಾರ ರಚನೆ ಮಾಡಿದ್ದಾರೆ.ಅಂತಹ ಸರ್ಕಾರದಿಂದ ಏನನ್ನು ಬಯಸೋದಕ್ಕೆ ಸಾದ್ಯವಿಲ್ಲ.೬೮೦೦ ಕೋಟಿಯಲ್ಲಿ ನಮಗೆ ೧% ಕೊಟ್ಟಿಲ್ಲಾಇದು ತಾರತಮ್ಯ ಅಲ್ವಾ..ಬೆಂಗಳೂರು ಅಭಿವೃದ್ಧಿ ಬಿಜೆಪಿ ಶಾಸಕರಿಗೆ ಮಾತ್ರನಾ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ರು