Select Your Language

Notifications

webdunia
webdunia
webdunia
webdunia

ಸುರೇಶ್​ ಕುಮಾರ್​ ಪರ ಕೆ.ಗೋಪಾಲಯ್ಯ ಪ್ರಚಾರ

ಸುರೇಶ್​ ಕುಮಾರ್​ ಪರ ಕೆ.ಗೋಪಾಲಯ್ಯ ಪ್ರಚಾರ
bangalore , ಭಾನುವಾರ, 7 ಮೇ 2023 (17:40 IST)
ಬೆಂಗಳೂರಿನ ರಾಜಾಜಿನಗರದ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ್ ಕುಮಾರ್ ಪರವಾಗಿ ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ.ಗೋಪಾಲಯ್ಯ ಮತಯಾಚನೆ ನಡೆಸಿದ್ರು.. ಸರಳ ಸಜ್ಜನಿಕೆಯ ವ್ಯಕ್ತಿ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿದ್ದಾರೆ, ಇಂತಹ ಶಾಸಕ ಕ್ಷೇತ್ರಕ್ಕೆ ಅಗತ್ಯವಿದೆ. ಇವರನ್ನು ಮತ್ತೊಮ್ಮೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಹೆಚ್ಚಿನ ಮತದೊಂದಿಗೆ ಗೆಲ್ಲಿಸಿ ಎಂದು ಕೆ.ಗೋಪಾಲಯ್ಯ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ರಮೇಶ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ದೇವೇಗೌಡ, ಪ್ರತಿಮಾ ರಮೇಶ್, ಮಾಜಿ ಉಪ ಮೇಯರ್ ರಾಘಣ್ಣ, ನಾಗರಾಜ್, ಒಕ್ಕೂಟದ ಅಧ್ಯಕ್ಷರಾದ ಸೋಮಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಗಾರ್ಮೆಂಟ್ಸ್​ಗಳಲ್ಲಿ ನಾರಾಯಣ ರಾಜು ಪ್ರಚಾರ