Select Your Language

Notifications

webdunia
webdunia
webdunia
webdunia

ಅನರ್ಹ ಶಾಸಕರ ಪುರಾಣ ಬಿಚ್ಚಿಡುವೆ ಎಂದ ಕುಮಾರಸ್ವಾಮಿ

ಅನರ್ಹ ಶಾಸಕರ ಪುರಾಣ ಬಿಚ್ಚಿಡುವೆ ಎಂದ ಕುಮಾರಸ್ವಾಮಿ
ಮಂಡ್ಯ , ಗುರುವಾರ, 14 ನವೆಂಬರ್ 2019 (20:39 IST)
ಅನರ್ಹ ಶಾಸಕರ ಪುರಾಣವನ್ನು ಉಪ ಚುನಾವಣೆಯಲ್ಲಿ ಬಿಚ್ಚಿಡುವೆ ಅಂತ ಮಾಜಿ ಸಿಎಂ ಎಚ್ಚರಿಕೆ ನೀಡಿದ್ದಾರೆ.

ರೈತರ ಸಾಲ ಮನ್ನಾ ವಿಚಾರದಲ್ಲಿ ಮೈತ್ರಿ ಸರ್ಕಾರವು ದಾಖಲೆ ಮಾಡಿತ್ತು. ಜನಪರವಾದ ಸರ್ಕಾರವನ್ನು ಬೀಳಿಸಿದ ಅನರ್ಹ ಶಾಸಕರನ್ನು ಸೋಲಿಸುವುದು ನಮ್ಮ ಪಕ್ಷದ ಮೊದಲ ಆದ್ಯತೆಯಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯದ ಕೆ.ಆರ್.ಪೇಟೆ ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ ಅವರ ನೂತನ ಗೃಹಪ್ರವೇಶ ಸಮಾರಂಭದಲ್ಲಿ ಭಾಗವಹಿಸಿ ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದರು.

2006ರಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೇ ಕೆ.ಆರ್.ಪೇಟೆಗೆ ಇಂಜಿನಿಯರಿಂಗ್ ಕಾಲೇಜು ನೀಡಿ ಕ್ಷೇತ್ರಕ್ಕೆ 500 ಕೋಟಿ ಅನುದಾನವನ್ನು ನೀಡಿದ್ದೆ. 

ಕೆ.ಆರ್.ಪೇಟೆಗೆ ನಾರಾಯಣಗೌಡನನ್ನು ಕೇಳಿಕೊಂಡು ಅನುದಾನ ಬಿಡುಗಡೆ ಮಾಡಬೇಕಾ? ಸರ್ಕಾರದ ದಾಖಲೆಯನ್ನು ಪರಿಶೀಲಿಸಲಿ, ಅವೇ ಉತ್ತರ ನೀಡ್ತಾವೆ, ನಾನು ಮಂಜೂರು ಮಾಡಿಕೊಟ್ಟಿರುವ ಯೋಜನೆಗಳನ್ನು ಯಡಿಯೂರಪ್ಪ ಮಾಡಿಕೊಟ್ಟರು. ಪುಣ್ಯಾತ್ಮ ಯಡಿಯೂರಪ್ಪ ಇಂದ್ರ, ಚಂದ್ರ ಅಂತೆಲ್ಲಾ ಚಮಚಾಗಿರಿ ಮಾಡ್ತಿರೋ ನಾರಾಯಣಗೌಡ ಹೊಗಳ್ತಿದ್ದಾರೆ ಅಂತ ಕಿಚಾಯಿಸಿದ್ರು.

ನನ್ನ ಕುಟುಂಬವನ್ನು ಎದುರಾಕಿಕೊಂಡು ಪಕ್ಷದ ಟಿಕೆಟ್ ನೀಡಿ ತಪ್ಪು ಮಾಡಿದೆ. ಕುಟುಂಬಕ್ಕೆ ನೋವು ನೀಡಿದೆ. ಸುಳ್ಳು ಆರೋಪಗಳಿಗೆ ಉತ್ತರ ನೀಡಬೇಕಾ? ಸದ್ಯದಲ್ಲಿಯೇ ಮತ್ತೆ ಕೆ.ಆರ್.ಪೇಟೆಗೆ ಬರ್ತೀನಿ. ಈತನ ಪುರಾಣವನ್ನು ಬಿಚ್ಚಿಡ್ತೀನಿ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಯರನ್ನೇ ಟಾರ್ಗೆಟ್ ಮಾಡ್ತಿರೋ ಚಿರತೆ: ಶಾಕಿಂಗ್