Webdunia - Bharat's app for daily news and videos

Install App

ಕೋಡಿಶ್ರೀ ಹೇಳಿದ್ದ ಬಾಂಬ್ ಭವಿಷ್ಯ ನಿಜವಾಯ್ತು: ಇನ್ನೊಂದೂ ನಿಜವಾದರೆ..!

Krishnaveni K
ಸೋಮವಾರ, 11 ಮಾರ್ಚ್ 2024 (09:52 IST)
ಬೆಂಗಳೂರು: ಈ ವರ್ಷ ಬಾಂಬ್ ಸ್ಪೋಟವಾಗುತ್ತದೆ ಎಂಬ ಕೋಡಿಶ್ರೀ ಭವಿಷ್ಯ ಇತ್ತೀಚೆಗೆ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣವಾದ ಬಳಿಕ ನಿಜವಾಗಿದೆ ಎಂದು ಅನಿಸಿತ್ತು. ಆದರೆ ಇದರ ಜೊತೆಗೆ ಕೋಡಿಶ್ರೀಗಳು ಇನ್ನೊಂದು ಭವಿಷ್ಯ ನುಡಿದಿದ್ದರು. ಅದು ನಿಜವಾಗುತ್ತಾ ನೋಡಬೇಕು.

ಇತ್ತೀಚೆಗೆ ಭವಿಷ್ಯ ನುಡಿದಿದ್ದ ಕೋಡಿಶ್ರೀಗಳು ಹಲವು ವಿಚಾರಗಳನ್ನು ಹೇಳಿದ್ದರು. ಅವರು ಹೇಳಿದ ಭವಿಷ್ಯ ಅನೇಕ ಬಾರಿ ನಿಜವಾಗಿದೆ. ಈ ಬಾರಿ ಜಾಗತಿಕವಾಗಿ ಮತಾಂಧತೆ ಹೆಚ್ಚಾಗಲಿದೆ. ಭೂಕಂಪ ಆಗುವ ಸಾಧ‍್ಯತೆಯಿದೆ. ಧಾರ್ಮಿಕ ಮುಖಂಡನ ಸಾವೂ ಆಗಲಿದೆ ಎಂದಿದ್ದರು.

ಅದರ ಜೊತೆಗೆ ಇನ್ನೊಂದು ವಿಚಾರವನ್ನೂ ಹೇಳಿದ್ದರು. ಯುಗಾದಿಗೆ ಮೊದಲು ಮಳೆಯಿಲ್ಲದೇ ಜನ ನೀರಿಗಾಗಿ ಹಾಹಾಕಾರ ನಡೆಸಬಹುದು. ಆದರೆ ಯುಗಾದಿ ನಂತರ ಮಳೆ ಸಾಧ‍್ಯತೆಯಿದೆ ಎಂದಿದ್ದರು. ಹೀಗಾಗಿ ಈ ಭವಿಷ್ಯ ನಿಜವಾಗುವುದೇ ಎಂದು ಜನರು ಎದಿರು ನೋಡುತ್ತಿದ್ದಾರೆ.

ಇತ್ತೀಚೆಗೆ ಬೆಂಗಳೂರ ಸೇರಿದಂತೆ ಇಡೀ ರಾಜ್ಯದಲ್ಲಿ ಸೂಕ್ತ ಮಳೆಯಿಲ್ಲದೇ ಜನ ನೀರಿಗಾಗಿ ಪರದಾಡುವಂತಾಗಿದೆ. ಹೀಗಾಗಿ ಯುಗಾದಿಗೆ ಇನ್ನು ಒಂದೇ ತಿಂಗಳು ಬಾಕಿಯಿದ್ದು, ಕೋಡಿಶ್ರೀಗಳು ಭವಿಷ್ಯ ನುಡಿದಂತೆ ಮಳೆಯಾದರೆ ಜನರು ನೀರಿಗಾಗಿ ಬವಣೆ ಪಡುವುದು ಕೊಂಚ ಮಟ್ಟಿಗೆ ತಗ್ಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments