Webdunia - Bharat's app for daily news and videos

Install App

ಚಾಕೊಲೇಟ್ ಫೀಲ್ಡ್ ಎಂಟ್ರಿಗೆ ರೆಡಿಯಾದ ಕೆಎಂಎಫ್

Webdunia
ಗುರುವಾರ, 3 ಆಗಸ್ಟ್ 2023 (15:34 IST)
ದಿನದಿಂದ ದಿನಕ್ಕೆ ನಂದಿನಿ ಬ್ರಾಂಡ್ ಹೆಚ್ಚು ಜನ ಮನ್ನಣೆ ಗಳಿಸುತ್ತಿದೆ. ಇಷ್ಟು ದಿನ ಹಾಲಿನ ಐಟಮ್ಸ್  ಗೆ ಮಾತ್ರ ಫೇಮಸ್ ಆಗಿತ್ತು. ಇದೀಗ ಬ್ರಾಂಡ್ ಹೆಚ್ಚಿಸಿಕೊಳ್ಳಲು ಹೊಸ ಪ್ಲಾನ್ ಗೆ ಕೆ ಎಂ ಎಫ್ ರೆಡಿಯಾಗಿದೆ. ಇನ್ಮುಂದೆ ನಂದಿನಿ ಬ್ರಾಂಡ್ ನಲ್ಲೂ  ಚಾಕೊಲೇಟ್ ಸಿಗಲಿದೆ.ಈಗಾಗಲೇ ಜನಮನ್ನಣೆ ಹಾಗೂ ನಂಬಿಕೆಗಳಿಸಿರುವ ನಂದಿನಿಯಿಂದ ಇನ್ನಷ್ಟು ಆರೋಗ್ಯಕರ ಉತ್ಪನ್ನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ದೇಶದಲ್ಲಿ ತನ್ನ ಚಾಪು ಮೂಡಿಸುತ್ತಿರುವ ನಂದಿನಿ, ಇನ್ಮುಂದೆ ಚಾಕೊಲೇಟ್ ಗೂ ಕೈ ಹಾಕುತ್ತಿದೆ.

ಇನ್ನು ಲಂಡನ್ ಮೂಲದ ಮಾರುಕಟ್ಟೆ ಸಂಶೋಧನಾ ಗುಂಪಿನ ಸರ್ವೇ ಪ್ರಕಾರ ದೇಶದಲ್ಲಿ ಅತಿ ಹೆಚ್ಚು ಬಳಸುವ ಬ್ರಾಂಡ್ ನ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ಪಾರ್ಲೆ- ಜಿ ಮೊದಲ ಸ್ಥಾನವನ್ನ ಗಿಟ್ಟಿಸಿಕೊಂಡಿದ್ರೆ, ಅಮೂಲ್ ಕಳೆದ ವರ್ಷ 2 ನೇ ಸ್ಥಾನದಲ್ಲಿದದ್ದು, ಈ ವರ್ಷ 3 ನೇ ಸ್ಥಾನಕ್ಕೆ ಕುಸಿದಿದೆ. ಇನ್ನು ನಂದಿನಿ ಬ್ರಾಂಡ್ ಕಳೆದ ವರ್ಷ 7 ನೇ ಸ್ಥಾನದಿಂದ ಈ ವರ್ಷ 6 ನೇ ಸ್ಥಾನಕ್ಕೆ ಬಂದಿದೆ. ಈ ಮೂಲಕ ನಂದಿನಿ ಬ್ರಾಂಡ್ ಗೆ ಇನ್ನಷ್ಟು ಬೇಡಿಕೆ ಹೆಚ್ಚು ಮಾಡಲು  ಕೆಎಂಎಫ್ ಹೊರಟಿದೆ.

ಹಾಗಾದ್ರೆ ನಂದಿನಿ ಹೊಸ ಪ್ರಾಡಕ್ಟ್ ಗಳು ಯಾವುವು ಅಂತಾ ನೋಡೋದಾದ್ರೆ
ಪನ್ನಿರ್ ನಿಪ್ಪಟ್ಟು
ಫೀನಟ್ ಚಿಕ್ಕಿ
ಕಡಲೆ ಮಿಠಾಯಿ
ಸ್ಪೇಷಲ್ ಮಿಲ್ಕ್ ಬರ್ಫಿ
ಬೆಲ್ಲದ ಪೇಡಾ
ಚಾಕೋಲೆಟ್ ಬಿಸ್ಕೆಟ್
ಬ್ಲಾಕ್ ಕರೆಂಟ್ ಚಾಕೋಲೇಟ್
ಆರೆಂಜ್ ಚಾಕೋಲೆಟ್
ಬ್ಲೂಬೆರಿ ಚಾಕೋಲೆಟ್

ಚಾಕೊಲೇಟ್ ಫೀಲ್ಡ್ ಗೂ ಎಂಟ್ರಿಯಾಗಲು ಕೆಎಂಎಫ್ ಮುಂದಾಗಿದ್ದು, ಆರೋಗ್ಯಕರ ನಂದಿನಿ ಚಾಕೊಲೇಟ್ ಮಾರುಕಟ್ಟೆ ಬರಲಿದೆ. ಸದ್ಯ ಚಾಕೊಲೇಟ್ ಕ್ಷೇತ್ರದಲ್ಲಿ ಡೈರಿ ಮಿಲ್ಕ್ ಒಂದೇ ದೊಡ್ಡ ಹೆಸರು ಇತ್ತು.
ಹಾಲು, ತುಪ್ಪ ಹಾಗೂ ಮೊಸರು ಸೇರಿದಂತೆ ಹಾಲಿನ ಉತ್ಪನ್ನಗಳಲ್ಲಿ ಮಾತ್ರ ಹೆಸರುಗಳಿಸಿದ್ದ ಕೆಎಂಎಫ್ ಇದೀಗ ಡೈರಿ ಮಿಲ್ಕ್ ಗೆ ಕಾಂಪಿಟೇಷನ್ ನೀಡಲಿದೆ. ಜೊತೆಗೆ ಮಕ್ಕಳ ಪೌಷ್ಠಿಕ ಆಹಾರವೂ ಲಾಂಚ್ ಆಗಲಿವೆ.
 
 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಹಮ್ಮದಾಬಾದ್ ವಿಮಾನ ದುರಂತದಲ್ಲಿ ಸಾವಿಗೀಡಾದವರ ಒಟ್ಟು ಸಂಖ್ಯೆ ಇಲ್ಲಿದೆ

ಕೇರಳದ ರಂಜಿತಾ ಸಾವಿನ ಅಪಹಾಸ್ಯ ಮಾಡಿದ ಉಪ ತಹಶೀಲ್ದಾರ್ ಸಸ್ಪೆಂಡ್

Air India Plane Crash: ಮೃತದೇಹಗಳನ್ನು ಗುರುತಿಸುವುದು ಹೇಗೆ ಇಲ್ಲಿದೆ ಪ್ರಕ್ರಿಯೆ

ಇದ್ದಕ್ಕಿದ್ದಂತೆ ಇಂದು ಚಿನ್ನಸ್ವಾಮಿ ಕಾಲ್ತುಳಿತ ವಿರೋಧಿಸಿ ಬಿಜೆಪಿ ಪ್ರತಿಭಟನೆ ಹಿಂಪಡೆದಿದ್ದೇಕೆ

Indore: ರಾಜ ರಘುವಂಶಿ ಜೊತೆ ಇನ್ನೊಬ್ಬ ಮಹಿಳೆಯ ಹತ್ಯೆಗೆ ಸೋನಂ ಆಂಡ್ ಗ್ಯಾಂಗ್ ಸ್ಕೆಚ್ ಹಾಕಿದ್ದೇಕೆ

ಮುಂದಿನ ಸುದ್ದಿ
Show comments