Select Your Language

Notifications

webdunia
webdunia
webdunia
webdunia

ಮಗನನ್ನ ಅಪಹರಿಸಿ ಕೊಲೆ: ವಿಷಯ ಕೇಳಿ ಹೃದಯಾಘಾತದಿಂದ ತಾಯಿ ಸಾವು

ಮಗನನ್ನ ಅಪಹರಿಸಿ ಕೊಲೆ: ವಿಷಯ ಕೇಳಿ ಹೃದಯಾಘಾತದಿಂದ ತಾಯಿ ಸಾವು
ಕಲಬುರ್ಗಿ , ಗುರುವಾರ, 12 ಅಕ್ಟೋಬರ್ 2017 (20:54 IST)
ಕಲಬುರ್ಗಿ: ಹಣಕ್ಕಾಗಿ ವ್ಯಕ್ತಿಯನ್ನು ಅಪಹರಿಸಿ, ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ವಿಷಯ ತಿಳಿದ ತಾಯಿಯೂ ಆಘಾತದಿಂದ ಮೃತಪಟ್ಟಿದ್ದಾರೆ.

ಇಂತಹದ್ದೊಂದು ಮನಕಲಕುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. ಮೋನಪ್ಪ(42) ವ್ಯಕ್ತಿಯನ್ನು ಅಪಹರಿಸಿ, ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು. ಮೋನಪ್ಪ ಕುಟುಂಬದವರು ಸಹ ಅಪಹರಣಕಾರರಿಗೆ 6 ಲಕ್ಷ ರೂ. ನೀಡಿದ್ದರು. ಆದರೂ ದುಷ್ಕರ್ಮಿಗಳು ಸೈಯದ್ ಚಿಂಚೋಳಿ-ನರೋಣ ನಡುವೆ ಮೊನಪ್ಪನನ್ನು ಹತ್ಯೆ ಮಾಡಿ, ಪರಾರಿಯಾಗಿದ್ದಾರೆ ಎನ್ನಲಾಗಿದೆ.
 
webdunia

ಮಗನ ಸಾವಿನ ವಿಷಯ ತಿಳಿದ ಲಲಿತಾ ಬಾಯಿ(70) ಆಘಾತಕ್ಕೊಳಗಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಮಗಿ ಕೊಲೆ ಯತ್ನ ಆರೋಪ ಪ್ರಕರಣ: ನಾನು ಕೊಲೆ ಮಾಡಿಲ್ಲ ಎಂದ ಕಾರು ಚಾಲಕ