Select Your Language

Notifications

webdunia
webdunia
webdunia
webdunia

ಧರ್ಮ ರಾಜಕಾರಣ ಸಲ್ಲದು ಎಂದ ಖರ್ಗೆ

ಧರ್ಮ ರಾಜಕಾರಣ ಸಲ್ಲದು ಎಂದ ಖರ್ಗೆ
ಕಲಬುರಗಿ , ಶನಿವಾರ, 20 ಅಕ್ಟೋಬರ್ 2018 (16:40 IST)
ಧಾರ್ಮಿಕ ವಿಷಯ ಹಾಗೂ ವಿಚಾರಗಳನ್ನು ರಾಜಕಾರಣದಲ್ಲಿ ಬೆರೆಸುವುದಕ್ಕೆ ತಮ್ಮ ವಿರೋಧವಿದೆ ಎಂದು ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಚುನಾವಣೆಯಲ್ಲಿ ಪಕ್ಷದ ಪ್ರಣಾಳಿಕೆ ಆಧರಿಸಿ ಮತಯಾಚನೆ ಮಾಡಲಾಗುವುದೇ ವಿನಹ ಧರ್ಮ ಹಾಗೂ ಧರ್ಮಾಧಾರಿತ ವಿಷಯಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುವುದಿಲ್ಲ ಎಂದರು.

ಚುನಾವಣೆ ಸಮಯದಲ್ಲಿ ಇಂತಹ ವಿಚಾರಗಳನ್ನು ಪ್ರಸ್ತಾಪ ಮಾಡುವುದು ಅನಗತ್ಯ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದು, ಧರ್ಮದ ಕುರಿತು ಸಂವಾದ ಏರ್ಪಡಿಸಿದರೆ ತಾವೂ ಭಾಗವಹಿಸಿ ಅಭಿಪ್ರಾಯ ವ್ಯಕ್ತಪಡಿಸುವುದಾಗಿ ಹೇಳಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಕುಡಿತಕ್ಕೆ ಹಣ ಕೊಡಲಿಲ್ಲಾಂತ ಹೆಣವಾದ ಯುವಕ