Select Your Language

Notifications

webdunia
webdunia
webdunia
webdunia

ಕುಡಿತಕ್ಕೆ ಹಣ ಕೊಡಲಿಲ್ಲಾಂತ ಹೆಣವಾದ ಯುವಕ

ಕುಡಿತಕ್ಕೆ ಹಣ ಕೊಡಲಿಲ್ಲಾಂತ ಹೆಣವಾದ ಯುವಕ
ಕಲಬುರಗಿ , ಶನಿವಾರ, 20 ಅಕ್ಟೋಬರ್ 2018 (16:33 IST)
ಕುಡಿತದ ದಾಸನಾಗಿದ್ದ ಯುವಕನಿಗೆ ಕುಡಿತಕ್ಕೆ ಹಣ ಕೊಡಲಿಲ್ಲ ಎಂದು ಮನನೊಂದು ಹೆಣವಾದ ಘಟನೆ ನಡೆದಿದೆ.

ಮದ್ಯಪಾನಕ್ಕೆ ಹಣ ಕೊಡಲು ಪೋಷಕರು ನಿರಾಕರಣೆ ಮಾಡಿರುವ ಹಿನ್ನೆಲೆಯಲ್ಲಿ ಮನನೊಂದು ಯುವಕನೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಶರಣಬಸಪ್ಪ ಎಂಬ ಯುವಕ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದಾನೆ.

ಯುವಕ ಶರಣಬಸಪ್ಪ ತನ್ನ ತಂದೆಯ ಬೈಕ್ ನಲ್ಲಿದ್ದ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದನು. ಆತನನ್ನು ಆಸ್ಪತ್ರೆಗೆ ದಾಖಲು ಮಾಡಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ದುರ್ಗಾ ಪೂಜೆ ಆಚರಣೆ ವೇಳೆ ದಾಂಧಲೇ ನಡೆಸಿದ್ದ ಏಳು ಜನರ ಬಂಧನ