Select Your Language

Notifications

webdunia
webdunia
webdunia
webdunia

ವಾಚ್ ತುಂಬಿದ್ದ ಲಾರಿಯನ್ನೇ ಹೈಜಾಕ್ ಮಾಡಿದ್ದ ಖದೀಮರು

ವಾಚ್ ತುಂಬಿದ್ದ ಲಾರಿಯನ್ನೇ ಹೈಜಾಕ್ ಮಾಡಿದ್ದ ಖದೀಮರು
bangalore , ಮಂಗಳವಾರ, 24 ಜನವರಿ 2023 (19:59 IST)
ಟೆಂಪೊ ಅಡ್ಡಗಟ್ಟಿ ಬರೋಬ್ಬರಿ 57 ಲಕ್ಷ ಮೌಲ್ಯದ ವಾಚುಗಳ ಸಮೇತ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನ ಆರ್.ಆರ್.ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಜಮೀರ್ ಅಹಮದ್ ಹಾಗೂ ಸೈಯದ್ ಶಾಹೀದ್  ಬಂಧಿತ ಆರೋಪಿಗಳು. ಜನವರಿ 15ರ ರಾತ್ರಿ 10:45ರ  ಗಂಟೆಯ ಸುಮಾರಿಗೆ ಆರ್.ಆರ್.ನಗರದ ಜವರೇಗೌಡನ ದೊಡ್ಡಿ ಬಳಿ ಜೈದೀಪ್ ಎಂಟರ್ಪ್ರೈಸಸ್ ಹೆಸರಿನ ವೇರ್ ಹೌಸ್‌ಗೆ ಸೇರಿದ ಟೆಂಪೋವನ್ನ ಅಡ್ಡಗಟ್ಟಿದ್ದ ಆರೋಪಿಗಳು ಇಬ್ಬರ ಮೇಲೆ ಹಲ್ಲೆ ಮಾಡಿ ಟೆಂಪೋ ಸಮೇತ ಪರಾರಿಯಾಗಿದ್ದರು.
57 ಲಕ್ಷ ಮೌಲ್ಯದ ಟೈಟಾನ್ ಕಂಪನಿಯ 23 ಬಾಕ್ಸ್ ಗಳಿರುವ 1282 ವಾಚುಗಳಿದ್ದ ಟೆಂಪೋವನ್ನ ವೇರ್ ಹೌಸ್ ಕೆಲಸಗಾರರಾದ ಜಾನ್ ಮತ್ತು ಬಿಸಾಲ್ ಕಿಸಾನ್ ಮಾಲೂರಿನ‌ ಪ್ಲಿಪ್ ಕಾರ್ಟ್ ಮೂಲಕ ಆರ್.ಆರ್‌.ನಗರದ ಜವರೇಗೌಡ ನಗರದಲ್ಲಿರುವ ಬಳಿ ಬರುವಾಗ ಆರೋಪಿಗಳು  ಒಂದು ಕಾರ್ 3 ದ್ವಿಚಕ್ರ ವಾಹನಗಳಲ್ಲಿ ಆರೋಪಿಗಳು ಅಡ್ಡಗಟ್ಟಿ ಕೈಗಳಿಂದ ಹಲ್ಲೆ ಮಾಡಿ ಟೆಂಪೊ ಸಮೇತ ಕೊಂಡೊಯ್ದಿದ್ದರು. ಈ ಸಂಬಂಧ ಆರ್.ಆರ್.ನಗರ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಇಬ್ಬರನ್ನು ಬಂಧಿಸಲಾಗಿತ್ತು.
 
ಆರೋಪಿಗಳ ವಿಚಾರಣೆ ವೇಳೆ ದೂರುದಾರ ಹನುಮೇಗೌಡನ  ಟೆಂಪೊ ತನ್ನ ಬೈಕಿಗೆ ಟಚ್ ಮಾಡಿದ್ದ.‌ ಇದರಿಂದ ಅಸಮಾನಧಾನಗೊಂಡು ಟೆಂಪೋ ಹಿಂಬಾಲಿಸಿ ಹಲ್ಲೆ ಮಾಡಿ ಟೆಂಪೊ ಸಮೇತ ಹೊಯ್ದಿದ್ದರು. ವಾಹನದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಾಚ್ ಗಳನ್ನು ತೆಗೆದುಕೊಂಡು ಬೇರೆಡೆ ಸಾಗಾಟ ಮಾಡಿದ್ದರು. ಬಳಿಕ ಟೆಂಪೊ ಅದೇ ಜಾಗದಲ್ಲಿ ಬಿಟ್ಟು ತಲೆಮರೆಸಿಕೊಂಡಿದ್ದರು. ಆರೋಪಿಗಳ ವಿರುದ್ದ ಈ ಹಿಂದೆ ಕ್ರಿಮಿನಲ್‌ ಕೇಸ್ ಗಳು ದಾಖಲಾಗಿಲ್ಲ. ಸದ್ಯ ಇಬ್ಬರನ್ನ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ ಎಂದು ನಗರ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ‌.

Share this Story:

Follow Webdunia kannada

ಮುಂದಿನ ಸುದ್ದಿ

ಯಲಹಂಕ ವಲಯದ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳ ಪರಿಶೀಲನೆ ನಡೆಸಿದ ಆಯುಕ್ತರು