Select Your Language

Notifications

webdunia
webdunia
webdunia
webdunia

ಟ್ವೀಟ್ ನೋಡಿ ರೋಷಾವೇಷದಲ್ಲಿದ್ದ ಹೈಕಮಾಂಡ್ ಗೆ ವೀರಪ್ಪ ಮೊಯಿಲಿ ಹೇಳಿದ್ದೇನು?!

ಟ್ವೀಟ್ ನೋಡಿ ರೋಷಾವೇಷದಲ್ಲಿದ್ದ ಹೈಕಮಾಂಡ್ ಗೆ ವೀರಪ್ಪ ಮೊಯಿಲಿ ಹೇಳಿದ್ದೇನು?!
ಬೆಂಗಳೂರು , ಶುಕ್ರವಾರ, 16 ಮಾರ್ಚ್ 2018 (11:08 IST)
ಬೆಂಗಳೂರು: ವೀರಪ್ಪ ಮೊಯಿಲಿ ಕಾಂಗ್ರೆಸ್ ಪಕ್ಷದ ವಿದ್ಯಮಾನಗಳ ಕುರಿತು ಮಾಡಿರುವ ಟ್ವೀಟ್ ರಾಜ್ಯ ರಾಜಕಾರಣದಲ್ಲಿ ಭಾರೀ ಕೋಲಾಹಲವುಂಟು ಮಾಡಿರುವ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿಸಿದೆ.
 

ಟ್ವೀಟ್ ಬಗ್ಗೆ ಭಾರೀ ಚರ್ಚೆಯಾಗುತ್ತಿದ್ದಂತೆ, ವೀರಪ್ಪ ಮೊಯಿಲಿಗೆ ದೂರವಾಣಿ ಕರೆ ಮಾಡಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ವಿವರಣೆ ಕೇಳಿದ್ದಾರೆ. ಈ ಸಂದರ್ಭದಲ್ಲಿ ಅಸಮಾಧಾನಗೊಂಡಿದ್ದ ವೇಣುಗೋಪಾಲ್ ಅವರನ್ನು ಸಮಾಧಾನಿಸಿದ್ದಾರೆ.

‘ನಾನು ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತ. ಹೀಗಿರುವಾಗ ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸ ಮಾಡಲು ಸಾಧ್ಯವೇ? ನನ್ನ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಇದು ನಾನು ಮಾಡಿರುವ ಟ್ವೀಟ್ ಅಲ್ಲ’ ಎಂದು ವೇಣುಗೋಪಾಲ್ ಗೆ ಮೊಯಿಲಿ ಸಮಜಾಯಿಷಿ ನೀಡಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ಆಪ್ತ ಗೆಳೆಯನ ಪ್ರಧಾನಿ ಮೋದಿಗೆ ಉಳಿಸಿಕೊಳ್ಳಲು ಆಗಲೇ ಇಲ್ಲ!