Publish Date: Thu, 25 Jan 2018 (10:06 IST)
Updated Date: Thu, 25 Jan 2018 (10:11 IST)
ಮಂಗಳೂರು: ಮಹದಾಯಿ ನದಿ ನೀರಿಗಾಗಿ ವಿವಿಧ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ದ.ಕ. ಜಿಲ್ಲೆಯಲ್ಲಿ ಅಷ್ಟೊಂದು ಬೆಂಬಲ ವ್ಯಕ್ತವಾಗಿಲ್ಲ.
ಕೆಲವೊಂದು ಕಡೆ ಒಂದೊಂದು ಬಸ್ ಸಂಚಾರ ಸ್ಥಗಿತಗೊಂಡಿರುವುದು ಬಿಟ್ಟರೆ ಪರಿಸ್ಥಿತಿ ಸಹಜವಾಗಿಯೇ ಇದೆ. ಕೇರಳದಿಂದ ಕರ್ನಾಟಕದ ಕಡೆಗೆ ಸಂಚರಿಸುವ ಬಸ್ ಗಳು ಯಥಾ ಪ್ರಕಾರ ಸಂಚಾರ ನಡೆಸುತ್ತಿವೆ.
ನಿನ್ನೆಯಷ್ಟೇ ಕೇರಳದಲ್ಲೂ ಬಂದ್ ಇದ್ದ ಕಾರಣ ಇಲ್ಲಿನ ಜನ ಇಂದಿನ ಬಂದ್ ಗೆ ಅಷ್ಟೊಂದು ಪ್ರತಿಕ್ರಿಯಿಸಿಲ್ಲ. ಖಾಸಗಿ ವಾಹನಗಳು, ಅಂಗಡಿ ಮುಂಗಟ್ಟುಗಳೂ ಎಂದಿನಂತೆ ಇವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ