ಬೆಂಗಳೂರು: ವಿಶ್ವಾಸ ಮತ ನಡೆಯುವುದು ಡೌಟು ಎಂದೇ ಹೇಳಲಾಗುತ್ತಿದೆ. ಇಂದೂ ಕೂಡಾ ವಿಶ್ವಾಸ ಮತ ಚರ್ಚೆ ನಡೆಸುತ್ತಾ ಕಾಲಹರಣ ಮಾಡಲು ಮೈತ್ರಿ ಪಕ್ಷಗಳು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ.
									
										
								
																	
ಇಂದೂ ಕೂಡಾ ಹಲವರು ಚರ್ಚೆಗೆ ಸಮಯ ಕೇಳಿದ್ದು ಈ ಮೂಲಕ ಇಂದೂ ಕೂಡಾ ಸ್ಪೀಕರ್ ಮತಕ್ಕೆ ಹಾಕಲು ಸಾಧ್ಯವಾಗುತ್ತದೆ ಎನ್ನಲಾಗದು. ಸುಪ್ರೀಂ ಕೋರ್ಟ್ ಇಂದು ಎರಡು ಅರ್ಜಿಗಳ ವಿಚಾರಣೆ ನಡೆಸಲಿದ್ದು, ಅದು ತಮಗೆ ಜೀವದಾನ ನೀಡಬಹುದು ಎಂಬ ಲೆಕ್ಕಾಚಾರದಲ್ಲಿ ಮೈತ್ರಿ ಪಕ್ಷಗಳಿದೆ.
									
			
			 
 			
 
 			
			                     
							
							
			        							
								
																	ಈ ಕಾರಣಕ್ಕಾಗಿಯೇ ಆದಷ್ಟು ವಿಳಂಬ ದೋರಣೆ ಅನುಸರಿಸುವ ತಂತ್ರಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಜೋತು ಬೀಳಬಹುದು. ಒಂದು ವೇಳೆ ದೋಸ್ತಿ ಪಕ್ಷಗಳು ಈ ರೀತಿ ಮಾಡಿದರೆ ಇಂದೂ ಬಿಜೆಪಿ ಸುಮ್ಮನೆ ಕೂರಬಹುದು ಎನ್ನಲಾಗದು. ಮೈತ್ರಿ ಪಕ್ಷಗಳ ವಿರುದ್ಧ ಸಿಡಿದೆದ್ದು ಆರಂಭದಲ್ಲೇ ಮತಕ್ಕೆ ಹಾಕಲು ಪಟ್ಟು ಹಿಡಿಯಬಹುದು. ಒಟ್ಟಾರೆ ಇಂದಿನ ಕಲಾಪ ಕುತೂಹಲ ಕೆರಳಿಸಿದೆ.