Select Your Language

Notifications

webdunia
webdunia
webdunia
webdunia

ಮುಂಬೈನಲ್ಲಿ ಹೈಡ್ರಾಮಾ: ಶ್ರೀಮಂತ ಪಾಟೀಲ್ ಭೇಟಿಗೆ ಮುಂದಾದ ಕಾಂಗ್ರೆಸ್ ಶಾಸಕಿ

ಮುಂಬೈನಲ್ಲಿ ಹೈಡ್ರಾಮಾ: ಶ್ರೀಮಂತ ಪಾಟೀಲ್ ಭೇಟಿಗೆ ಮುಂದಾದ ಕಾಂಗ್ರೆಸ್ ಶಾಸಕಿ
ಮುಂಬೈ , ಶನಿವಾರ, 20 ಜುಲೈ 2019 (16:17 IST)
ಶಾಸಕ ಶ್ರೀಮಂತ ಪಾಟೀಲ್ ರ ಭೇಟಿಗೆ ಯತ್ನಿಸಿದ ಮಹಾರಾಷ್ಟ್ರ ಕಾಂಗ್ರೆಸ್ ಶಾಸಕಿ ಯಶೋಮತಿ ಸುದ್ದಿಯಾಗಿದ್ದಾರೆ.

ಭೇಟಿಗೆ ಅವಕಾಶ ನೀಡದ ಪೋಲಿಸ್ ಅಧಿಕಾರಿಗಳ ವಿರುದ್ಧ ವಾಗ್ವಾದ ನಡೆಸಿದ್ದಾರೆ ಯಶೋಮತಿ.  

ಪೊಲೀಸರ ಜೊತೆ ನಡೆದ ವಾಗ್ವಾದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ಕಲಾಪದಲ್ಲಿ ಭಾಗವಹಿಸದೆ ರಾತ್ರೋರಾತ್ರಿ ನಾಪತ್ತೆಯಾಗಿದ್ದರು ಕಾಗವಾಡ ಶಾಸಕ.  

ಎದೆ ನೋವು ಅಂತ ಮುಂಬೈನ ಸೇಂಟ್ ಜಾರ್ಜ್ ಆಸ್ಪತ್ರೆ ಸೇರಿದ್ದಾರೆ ಶಾಸಕ‌ ಶ್ರೀಮಂತ ಪಾಟೀಲ್. ನಮ್ಮ ಎಂ ಎಲ್ ಎ ಗೆ ಭೇಟಿ ಮಾಡಿಸಿ, ಹೇಗಿದ್ದಾರೆ ಎಂದು ವಿಚಾರಿಸಬೇಕು. ಆಸ್ಪತ್ರೆಯಲ್ಲಿ ಕಾರ್ಡಿಯಾಕ್ ಯುನಿಟ್ ಇಲ್ಲ ಆದರೂ ಯಾಕೆ ಇಲ್ಲಿ ದಾಖಲಿಸಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ಶ್ರೀಮಂತ ಪಾಟೀಲ್ ಸುಪುತ್ರ ಶ್ರಿನಿವಾಸ ಪಾಟೀಲ್‌ ಜೊತೆ ಕೂಡ ವಾಗ್ವಾದ ನಡೆಸಿದ್ದಾರೆ ಯಶೋಮತಿ.  

ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಆದೇಶದ ಮೇರೆಗೆ ಶ್ರೀಮಂತ ಪಾಟೀಲ್ ಭೇಟಿಗೆ ಮಹಾರಾಷ್ಟ್ರ ಶಾಸಕಿ ನಿನ್ನೆ ತಡ ರಾತ್ರಿ ಆಸ್ಪತ್ರೆಗೆ ತೆರಳಿದ್ದರು.



Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯ ರೈತರ ಮೊಗದಲ್ಲಿ ಮಂದಹಾಸ; ಕಾರಣ ಏನು?