Publish Date: Sat, 20 Jul 2019 (10:15 IST)
Updated Date: Sat, 20 Jul 2019 (10:18 IST)
ಬೆಂಗಳೂರು: ಸೋಮವಾರ ವಿಶ್ವಾಸ ಮತ ಹಿನ್ನಲೆಯಲ್ಲಿ ಎರಡು ದಿನ ತಮ್ಮ ಶಾಸಕರನ್ನು ಕಾಯುವ ಕೆಲಸ ಆಯಾ ರಾಜಕೀಯ ಪಕ್ಷಗಳಿಗೆ ಎದುರಾಗಿದೆ.
ಸೋಮವಾರ ಸರ್ಕಾರದ ವಿರುದ್ಧ ಮತ ಹಾಕಲು ಬಿಜೆಪಿ ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳಲು ಬಿಜೆಪಿ ಈಗಾಗಲೇ ತನ್ನ ಶಾಸಕರನ್ನು ರೆಸಾರ್ಟ್ ನಲ್ಲಿರಿಸಿದೆ. ಇದೀಗ ಎರಡು ದಿನಗಳ ಬ್ರೇಕ್ ಇರುವುದರಿಂದ ಕೆಲವು ಶಾಸಕರು ಮನೆಗೆ ತೆರಳಿದ್ದಾರೆ.
ಆದರೆ ಈ ನಡುವೆ ಮೈತ್ರಿ ಪಕ್ಷಗಳನ್ನು ತಮ್ಮ ಶಾಸಕರನ್ನು ಸೆಳೆಯುವ ಅಪಾಯ ಇರುವುದರಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಶಾಸಕರಿಗೆ ಕರೆ ಮಾಡಿ ತಕ್ಷಣವೇ ರೆಸಾರ್ಟ್ ಗೆ ಮರಳಲು ಸೂಚಿಸಿದ್ದಾರೆ. ಅಲ್ಲದೆ, ತಾವೂ ಇಂದು ಶಾಸಕರ ಜತೆ ರೆಸಾರ್ಟ್ ನಲ್ಲಿ ಕಳೆಯಲು ನಿರ್ಧರಿಸಿದ್ದಾರೆ. ಇದರ ಜತೆಗೆ ತಮ್ಮ ಶಾಸಕರ ಜತೆ ಸೋಮವಾರ ಸದನದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಲಿದ್ದಾರೆ.