Webdunia - Bharat's app for daily news and videos

Install App

ಕಾಂಚಿಪುರ್ ಇದು ನಮ್ಮ ನೆರೆಯ ರಾಜ್ಯದ ಅತ್ಯಂತ ಹಳೆಯ ನಗರ

Webdunia
ಗುರುವಾರ, 30 ಸೆಪ್ಟಂಬರ್ 2021 (20:01 IST)
ಈ ನಗರವೂ ಕೇವಲ ಬರೀ ಸೀರೆಗಳಿಗೆ ಮಾತ್ರ ಹೆಸರುವಾಸಿಯಾಗಿಲ್ಲ, ಈ ನಗರದಲ್ಲಿ ಅಡಿಅಡಿಗೂ ದೇವಾಲಯಗಳು ಕಂಡು ಬರುವುದರಿಂದ ಸಾವಿರನಗರದ ದೇವಾಲಯ ಎಂದೇ ಖ್ಯಾತಿಯನ್ನೆ ಪಡೆದಿದೆ. ಅಲ್ಲದೇ ಹಿಂದೂಗಳು ಜೀವಿತಾವಧಿಯಲ್ಲಿ ನೋಡಬೇಕಾದ ಸ್ಥಳಗಳಲ್ಲಿ ಕಾಂಚಿಪುರಂ ಕೂಡ ಒಂದಾಗಿದೆ. ಬನ್ನಿ ವೀಕ್ಷಕರೇ ಕಂಚಿಯಲ್ಲಿರುವ ಕಾಮಾಕ್ಷೀದೇವಿಯ ಬಗ್ಗೆ ತಿಳಿಯೋಣ
 
ಹಲವಾರು ಕುತೂಹಲಕಾರಿ ಮಾಹಿತಿಯನ್ನ ಒಂದ್ದಾಗಿ ತಿಳಿಯುತ್ತಾ ಹೋಗೊಣ..
ಮೊದಲು ಕಾಮಕ್ಷಿ ಎಂಬ ಪದದ ಅರ್ಥ ತಿಳಿಯೋಣಾ..  ಸಂಸ್ಕೃತದಲ್ಲಿ ’ಕಾ’ ಎಂದರೇ ವಿದ್ಯಾಧರೆ ಸರಸ್ವತಿ , ’ಮಾ’ ಎಂದರೇ ಮಹಾಲಕ್ಷ್ಮೀ, ಹಾಗೂ ’ಕ್ಷೀ; ಎಂದರೇ ಕಣ್ಣು ಎಂದು ಆಗುತ್ತದೆ, ಅದ್ದರಿಂದ ಕಾಮಾಕ್ಷಿ ದೇವಿ ಸರಸ್ವತಿ ಮತ್ತು ಮಹಾಲಕ್ಷ್ಮೀಯನ್ನ ತನ್ನ ಕಣ್ಣುಗಳಾಗಿ ಒಂದ್ದಿದಾಳೆ ಎಂದು ಹೇಳಲಾಗುತ್ತದೆ, ಆದಿ ಪಾರ ಶಕ್ತಿ ಲಾಲಿತತ್ರೀಪುರ ಸುಂದರಿಯ ಮತ್ತೊಂದು ರೂಪವೇ ಈ ಕಾಮಾಕ್ಷಿ ಎಂದೂ ಹೇಳಲಾಗುತ್ತದೆ,  ಕಾಮಾಕ್ಷಿಯ ಇನ್ನೊಂದು ಅರ್ಥವೇ ಪ್ರೀತಿ ತುಂಬಿದ ಕಣ್ಣುಗಳು ಉಳ್ಳ ತಾಯಿ, ಈ ತಾಯಿಯೂ ಭಕ್ತರ ಇಷ್ಟಾರ್ಥಗಳನ್ನ ತನ್ನ ಕಣ್ಣುಗಳ ಮೂಲಕವೇ ನೇರವೇರಿಸುವ ತಾಯಿ ಆಗಿದ್ದಾಳೆ. ಈ ತಾಯಿಯ ಕಣ್ಣುಗಳಲ್ಲಿ ಎಂತವರನ್ನು ಮಂತ್ರ ಮುಗ್ಧಗೊಳಿಸುವ ಶಕ್ತಿ ಅಡಗಿದೆ.ಕಂಚಿ ಕಾಮಾಕ್ಷಿ ದೇವಾಲಯಾವನ್ನ ಕಂಚಿಕಾಮಕೋಟೆ ಎಂದು ಸಹ ಕರೆಯಲಾಗುತ್ತದೆ.  ಇಲ್ಲಿರುವ ಕಾಮಾಕ್ಷಿದೇವಿಯಾ ಮೂರ್ತಿ ಸ್ವಯಂಭುವಾಗಿದೆ. ಕಂಚಿಕಾಮಾಕ್ಷಿ ದೇವಿಯು ಭಾರತದಲ್ಲಿರುವ 18 ಶಕ್ತಿಪೀಠದಲ್ಲಿ ಒಂದಾಗಿದೆ, ದಕ್ಷ ಮಹಾರಾಜನ ಮಗಳದ ದಾಕ್ಷಯೀಣಿಯೂ  ತನ್ನ ಪತಿ ಪರಶೀವನಿಗೆ ತನ್ನ ತಂದೆ ದಕ್ಷನೂ ಮಾಡಿದ ಅವಮಾನದಿಂದ ನೊಂದು ದಕ್ಷಕುಂಡ ಯಾಗದಲ್ಲಿ ಜಿಗಿದು ತನ್ನ ಪ್ರಾಣ ತ್ಯಾಗಮಾಡುತ್ತಾಲೆ, ದಾಕ್ಷಯೀಣಿಯ ಪ್ರಾಣತ್ಯಾಗದಿಂದ ನೊಂದ ಪರಶೀವನೂ ಆಕೆಯ ದೇಹವನ್ನು ಕೈಯಲ್ಲಿ ಹಿಡಿದು ಪ್ರಳಯ ತಾಂಡವನ್ನು ಆಡತೋಡುಗುತ್ತಾನೆ. ಈ ಸಂದರ್ಭದಲ್ಲಿ ಮೂರು ಲೋಕದಲ್ಲಿ ಉಂಟಾಗಬಹುದಾದಂತಹ ಹಾನಿಯನ್ನ ತಡೆಯಲು ಮಹಾವಿಷ್ಣುವೂ ತನ್ನ ಸುದರ್ಶನ ಚಕ್ರದಿಂದ ದಾಕ್ಷಯಿಣಿ ದೇಹವನ್ನ ತುಂಡು ತುಂಡಾಗಿ ಮಾಡುತ್ತಾನೆ, ಆಕೆಯ ದೇಹದ ವಿವಿಧ ಭಾಗಗಳು ಭಾರತದ ವಿವಿದೆಡೆ ಮತ್ತು ಶ್ರೀಲಾಂಕದಲ್ಲಿ ಸೇರಿ  18 ಪ್ರದೇಶದಲ್ಲಿ ಬೀಳುತ್ತಾವೆ. ಈ ಪ್ರದೇಶಗಳನ್ನ ಅಷ್ಟಾದ ಶಕ್ತಿ ಪೀಠಗಳು ಎಂದು ಕರೆಯಲಾಗುತ್ತಾದೆ. ಕಂಚಿ ಕಾಮಾಕ್ಷಿ ದೇವಾಲಯವೂ ಅಷ್ಟಾದ ಶಕ್ತಿ ಪೀಠಗಳಲ್ಲಿ ಒಂದಾಗಿದ್ದು  , ಈ ಪ್ರದೇಶದಲ್ಲಿ ಸತಿ ಅಥವಾ ದಾಕ್ಷಯಿಣಿಯ ನಾಬಿಯ ಭಾಗ ಬಿದ್ದಿತ್ತು ಎನ್ನಲಾಗುತ್ತಾದೆ,

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments