Select Your Language

Notifications

webdunia
webdunia
webdunia
webdunia

ತೀವ್ರ ಕುತೂಹಲ ಕೆರಳಿಸಿದ 'ಸಿಎಂ ಬೊಮ್ಮಯಿ ಶಾಸಕ, ಸಂಸದ'ರ ಭೇಟಿ

ತೀವ್ರ ಕುತೂಹಲ ಕೆರಳಿಸಿದ 'ಸಿಎಂ ಬೊಮ್ಮಯಿ ಶಾಸಕ, ಸಂಸದ'ರ ಭೇಟಿ
ಬೆಂಗಳೂರು , ಗುರುವಾರ, 30 ಸೆಪ್ಟಂಬರ್ 2021 (12:30 IST)
ಬೆಂಗಳೂರು : ಇದುವರೆಗೆ ಸಾರ್ವಜನಿಕರ ಸೇವೆಗೆ ಇಳಿದಿದ್ದಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಇಂದು ಮಾತ್ರ ತೀವ್ರ ಕುತೂಹಲ ಕೆರಳಿಸುವಂತೆ, ತಮ್ಮ ಶಾಸಕರು, ಸಂಸದರ ಭೇಟಿಗೆ ಇಳಿದಿದ್ದಾರೆ. ಇದು ಕುತೂಹಲಕ್ಕೂ ಕಾರಣವಾಗಿದೆ.

ಇಂದು ಸಂಜೆಯವರೆಗೆ ಸಿಎಂ ಬಸವರಾಜ ಬೊಮ್ಮಾಯಿಯವರು ಶಾಸಕರ ಮತ್ತು ಸಂಸದರ ಭೇಟಿಯನ್ನು ಮಾಡಲಿದ್ದಾರೆ. ರೇಸ್ ಕೋರ್ಸ್ ನಿವಾಸದಲ್ಲಿ ಶಾಸಕರನ್ನು ಭೇಟಿಯಾಗಲಿರುವಂತ ಅವರು, ಶಾಸಕರು, ಸಂಸದರೊಂದಿಗೆ ಹಲವು ವಿಚಾರಗಳನ್ನು ಚರ್ಚಿಸೋದಾಗಿ ತಿಳಿದು ಬಂದಿದೆ.
ಈಗಾಗಲೇ ಶಾಸಕರು, ಸಂಸದರ ಭೇಟಿ ಆರಂಭಿಸಿರೋ ಸಿಎಂ ಬಸವರಾಜ ಬೊಮ್ಮಾಯಿಯವರು, ಇಂದು ಸಂಜೆವರೆಗೆ ಶಾಸಕರ ಅಹವಾಲು ಸ್ವೀಕರಿಸಲಿದ್ದಾರೆ. ಅಮೃತ ದೇಸಾಯಿ, ಮಸಾಲೆ ಜಯರಾಮ್, ಬೆಳ್ಳಿ ಪ್ರಕಾಶ, ಬೆಂಗಳೂರು ದಕ್ಷಿಣ ಶಾಸಕ ಕೃಷ್ಣಪ್ಪ, ಎಸ್ ರಘು, ರವಿ ಸುಬ್ರಹ್ಮಣ್ಯ, ಎಚ್ ವಿಶ್ವನಾಥ ಸೇರಿದಂತೆ ಅನೇಕರನ್ನು ಭೇಟಿ ಮಾಡಿದ್ದಾರೆ. ಸಂಜೆಯವರೆಗೆ ಇಂದು ಈ ಭೇಟಿ ಮುಂದುವರೆಯಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿಂದು 23,529 ಹೊಸ ಕೇಸ್ ಪತ್ತೆ, 311 ಮಂದಿ ಸಾವು