Publish Date: Fri, 21 Jan 2022 (18:58 IST)
Updated Date: Fri, 21 Jan 2022 (19:02 IST)
ನಗರದಲ್ಲಿ ಇತ್ತಿಚೆಗೆ ಪೊಲೀಸರ ಮೇಲೆ ಭ್ರಷ್ಟ ಆರೋಪಗಳ ಸಂಖ್ಯೆ ಹೆಚ್ಚಾಗುತ್ತಿವೆ. ಹೀಗಾಗಿ ಖುದ್ದು ಕಮಿಷನರ್ ಕಮಲ್ ಪಂಥ್ ರಿಯಾಕ್ಟ್ ಮಾಡಿದ್ದಾರೆ.
ಪೊಲೀರ ಮೇಲೆ ಹದ್ದಿನ ಕಣ್ಣೀಡಲು ಡಿಸಿಪಿಗಳಿಗೆ ಪಂಥ್ ಸೂಚನೆ ಕೊಟ್ಟಿದ್ದಾರೆ.
ಇಷ್ಟೇ ಅಲ್ಲದೆ ಖಡಕ್ ವಾರ್ನಿಂಗ್ ಕೂಡ ಕೊಟ್ಟಿದ್ದು, ಭ್ರಷ್ಟಾಚಾರದಲ್ಲಿ ತೊಡಗುವ ಯಾವೂದೇ ಅಧಿಕಾರಿ ಆದ್ರೂ ಬಿಡಲ್ಲ, ಅವ್ರ ಮೇಲೆ ಮುಲಾಜಿಲ್ಲದೆ ಕ್ರಮ ಕೈ ಗೊಳ್ಳುತ್ತೆ ಎಂದು ವಾರ್ನ್ ಮಾಡಿದ್ದಾರೆ.
ಇನ್ನೂ ಹೆಣ್ಣೂರು ಇನ್ಸ್ಪೆಕ್ಟರ್ ವಸಂತ್ ಕುಮಾರಗ ಮೇಲೆ ದೂರು ಬಂದಿದ್ದು ಅದನ್ನು ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಸೂಚಿಸಲಾಗಿದೆ. ತನಿಖೆಯಲ್ಲಿ ತಪ್ಪು ಕಂಡು ಬಂದ್ರೆ ಕ್ರಮ ತಗೋತಿವಿ ಎಂದಿದ್ದಾರೆ.