Select Your Language

Notifications

webdunia
webdunia
webdunia
webdunia

ಹಿಜಾಬ್ ವಿವಾದ ಸಿಎಂ ಭೇಟಿ ಮಾಡಿದ ಕಮಲ್ ಪಂಥ್

ಹಿಜಾಬ್ ವಿವಾದ ಸಿಎಂ ಭೇಟಿ ಮಾಡಿದ ಕಮಲ್ ಪಂಥ್
ಬೆಂಗಳೂರು , ಬುಧವಾರ, 9 ಫೆಬ್ರವರಿ 2022 (17:28 IST)
ರಾಜ್ಯದಲ್ಲಿ ಭುಗಿಲೆದ್ದ ಹಿಜಬ್ ವಿವಾದದ ಹಿನ್ನೆಲೆ ಪೊಲೀಸ್ ಆಯುಕ್ತ ಕಮಲ್ ಪಂಥ್ ಇಂದು ಸಿಎಂ ಬೊಮ್ಮಾಯಿ ಅವ ರನ್ನು ಭೇಟಿ ಮಾಡಿದ್ದಾರೆ. ಈ ವಿವಾದದ ಬಗ್ಗೆ ಬೆಂಗಳೂರು ನಗರದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿ ದ ಕಮಿಷನರ್​, ಈಗಾಗಲೇ ಆಯಾ ಠಾಣಾ ವ್ಯಾಪ್ತಿಯ ಇನ್ಸ್‌ಪೆಕ್ಟರ್​ಗಳಿಗೆ ಶಾಲಾ-ಕಾಲೇಜಿನ ಮೇಲೆ ನಿಗಾ ಇಡಲು ಸೂಚನೆ ನೀಡಿ ದ್ದಾರೆ.
ಸಿಎಂ ಭೇಟಿ ಬಳಿಕ ಕಮಿಷನರ್ ಕಮಲ್ ಪಂತ್​ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಬೆಂಗಳೂರಿನಲ್ಲಿ ಸೂಕ್ತ ಭದ್ರತೆ ಯನ್ನು ತೆಗೆದುಕೊಳ್ಳಲಾಗಿದೆ. ಶಾಲಾ ಕಾಲೇಜು ಬಳಿ ಸೂಕ್ತ ಭದ್ರತೆ ತೆಗೆದುಕೊಳ್ಳಲಾಗಿದೆ. ಪೊಲೀಸರು‌ ಶಾಲಾ ಕಾಲೇಜು ಬಳಿ ಗಸ್ತು ತಿರು ಗುತ್ತಿದ್ದಾರೆ. ಎಲ್ಲಾ ಅಧಿಕಾರಿಗಳಿಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ನಗರದಲ್ಲಿ ಯಾರೂ ಕೂಡ ಗುಂಪು ಸೇರುವಂತ್ತಿಲ್ಲ. ಯಾರಾದರು ‌ಗಲಾಟೆ ಮಾಡಿದರೆ ಅವರು ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಜಾಬ್ ವಿವಾದ ಸಿದ್ದರಾಮಯ್ಯ ಕಿಡಿ