Select Your Language

Notifications

webdunia
webdunia
webdunia
webdunia

ಪ್ರತಿಭಟನೆ ಹಾದಿ ಹಿಡಿದ ಆಭರಣ ವರ್ತಕರು

ಪ್ರತಿಭಟನೆ ಹಾದಿ ಹಿಡಿದ ಆಭರಣ ವರ್ತಕರು
ಹುಬ್ಬಳ್ಳಿ , ಶನಿವಾರ, 29 ಸೆಪ್ಟಂಬರ್ 2018 (15:51 IST)
ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಾಣಿಜ್ಯ ನಗರಿಯಲ್ಲಿ ಆಭರಣ ತಯಾರಕ ಮತ್ತು ವರ್ತಕರ ಸಂಘದವರು ಇವತ್ತು ಬೀದಿಗಿಳಿದಿದ್ದರು.

ಹುಬ್ಬಳ್ಳಿಯ ಆಭರಣ ತಯಾರಕ ಮತ್ತು ವರ್ತಕರ ಸಂಘದವರು ಇವತ್ತು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಆಭರಣ ತಯಾರಕರು ಮತ್ತು ವರ್ತಕರು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದು, ರೈತರಿಗೆ ನೀಡುವಂತೆ ಶೇ.3ರ ಬಡ್ಡಿ ದರದಲ್ಲಿ ಸಾಲ ನೀಡಬೇಕು. ಆಭರಣ ಕೆಲಸಗಾರರ ಕ್ಷೇಮ ಕಾಯಲು ಪ್ರತ್ಯೇಕ ನಿಗಮ ಸ್ಥಾಪಿಸಬೇಕು ಹಾಗೂ ರಿಕವರಿ ಹೆಸರಿನಲ್ಲಿ ಆಭರಣ ವರ್ತಕರ ಮೇಲೆ ಪೊಲೀಸರು ನಡೆಸುತ್ತಿರುವ ದೌರ್ಜನ್ಯವನ್ನ ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹುಬ್ಬಳ್ಳಿ ನಗರದ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಆಭರಣ ತಯಾರಕರು ಪ್ರತಿಭಟನಾ ಮೆರವಣಿಗೆ ನಡೆಸಿದರು. ತಹಸೀಲ್ದಾರ್ ಶಶಿಧರ ಮಾಡ್ಯಾಳ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಸಾಲದಿಂದ ಬೇಸತ್ತ ಯುವಕ ಸೇಲ್ ಗೆ ಇಟ್ಟದ್ದು ಏನು ಗೊತ್ತಾ?