Publish Date: Sat, 15 Sep 2018 (19:23 IST)
Updated Date: Sun, 16 Sep 2018 (00:42 IST)
ಬಹು ಪ್ರಸಿದ್ಧವಾಗಿರುವ ಕಂಬಳ ಹಾಗೂ ಇತರ ಪ್ರಾಣಿಗಳ ಗಾಡಿ ಸ್ಪರ್ಧೆಗಳಿಗೆ ನಿಷೇಧ ಹೇರಬೇಕು. ಹೀಗಂತ ಸುಪ್ರೀಂಕೋರ್ಟನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.
ಪ್ರಾಣಿ ದಯಾ ಸಂಘವು ಸುಪ್ರೀಂಕೋರ್ಟ ಮೆಟ್ಟಿಲೇರಿದೆ. ಕಂಬಳ ಹಾಗೂ ಗೂಳಿ ಸೇರಿದಂತೆ ಎತ್ತಿನ ಗಾಡಿಯಂತಹ ಓಟದ ಸ್ಪರ್ಧೆಗಳಿಗೆ ನಿಷೇಧ ಹೇರಬೇಕೆಂದು ಕೋರ್ಟ ಮೆಟ್ಟಿಲೇರಿದೆ.
ಈ ಹಿಂದೆ ರಾಜ್ಯ ವಿಧಾನ ಮಂಡಲ ಅಂಗೀಕರಿಸಿದ್ದ ಪ್ರಾಣಿ ಹಿಂಸೆ(ಕರ್ನಾಟಕ ತಿದ್ದುಪಡಿ) ತಡೆ ಕಾಯ್ದೆ – 2017ಕ್ಕೆ ಪೆಟಾ ಮತ್ತೆ ತಗಾದೆ ತೆಗೆದಿದೆ. ರಾಜ್ಯ ಸರಕಾರದ ಕಾಯ್ದೆಯನ್ನು ತಿರಸ್ಕಾರ ಮಾಡಬೇಕೆಂದು ಮತ್ತೆ ಅರ್ಜಿ ಸಲ್ಲಿಸಿದೆ. ಪೆಟಾ ಅರ್ಜಿ ಹಿನ್ನೆಲೆಯಲ್ಲಿ ಕರ್ನಾಟಕದ ಮುಖ್ಯವಾಗಿ ತಮಿಳುನಾಡಿನ ಕಂಬಳ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ.