Select Your Language

Notifications

webdunia
webdunia
webdunia
webdunia

ರೈತ ಸಂಘದಿಂದ ನೆರೆ ಸಂತ್ರಸ್ತರಿಗೆ ನೆರವು

ರೈತ ಸಂಘದಿಂದ ನೆರೆ ಸಂತ್ರಸ್ತರಿಗೆ ನೆರವು
ಚಿಕ್ಕಬಳ್ಳಾಪುರ , ಶನಿವಾರ, 25 ಆಗಸ್ಟ್ 2018 (18:25 IST)
ಕೊಡಗಿನ ನೆರೆ ಸಂತ್ರಸ್ತರಿಗೆ ನೆರವು ನೀಡಲು ಇದೀಗ ರಾಜ್ಯ ರೈತ ಸಂಘ ಮುಂದಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಹಾಗು ಶಿಡ್ಲಘಟ್ಟ ತಾಲ್ಲೂಕಿನ ರೈತರು ಕೊಡಗಿನ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸಿದ್ದಾರೆ.  

ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಛೇರಿಯ ಮುಂದೆ ಸೇರಿದ ನೂರಾರು ಜನ ರೈತರು, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಸಂಗ್ರಹಿಸಿರುವ ದೇಣಿಗೆ ನೀಡಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ , ರಾಜ್ಯ ರೈತ ಸಂಘದಿಂದ ಕೊಡಗಿನ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಪೂರೈಕೆಯ ಜೊತೆಗೆ 500 ಜನ ರೈತರ ತಂಡ ಅಲ್ಲಿ ಒಂದು ತಿಂಗಳ ಕಾಲ ಶ್ರಮದಾನ ಮಾಡಲಿದ್ದಾರೆ ಎಂದರು.  ಹತ್ತು ಟ್ರಾಕ್ಟರ್, ಜೆಸಿಬಿ ಗಳ ಮೂಲಕ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ‌ಕೊಡಗಿನಲ್ಲಿ ಪುನಃ ಮಳೆ ಶುರುವಾಗಿದ್ದು ಮಳೆ ನಿಂತ ಕೂಡಲೇ ರೈತರ ತಂಡ ತೆರಳಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.





Share this Story:

Follow Webdunia kannada

ಮುಂದಿನ ಸುದ್ದಿ

ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಮೇಲಾಟ ನಡೆಯಲ್ಲ ಎಂದವರಾರು?