Select Your Language

Notifications

webdunia
webdunia
webdunia
webdunia

ಇಂದಿನಿಂದ ಜನಸಂಕಲ್ಪ ಸಮಾವೇಶ

ಇಂದಿನಿಂದ ಜನಸಂಕಲ್ಪ ಸಮಾವೇಶ
bangalore , ಮಂಗಳವಾರ, 11 ಅಕ್ಟೋಬರ್ 2022 (15:29 IST)
ಇಂದಿನಿಂದ ಜನಸಂಕಲ್ಪ ಸಮಾವೇಶ ಮಾಡುತ್ತಿದ್ದೇವೆ. ಹಿರಿಯ ನಾಯಕರಾದ ಯಡಿಯೂರಪ್ಪ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಕಾರ್ಯಕ್ರಮಗಳನ್ನ ಜನರಿಗೆ ಮುಟ್ಟಿಸಲು ಈ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಸಿಎಂ ಬಸವರಾಜ್​​ ಬೊಮ್ಮಾಯಿ ಹೇಳಿದ್ರು. ಬೆಂಗಳೂರಿನಲ್ಲಿ ಮಾತನಾಡಿದ ಅವರು ಚುನಾವಣೆಗೆ ಸಜ್ಜಾಗಿ ಮತ್ತೆ BJP ಸರ್ಕಾರ ಅಧಿಕಾರಕ್ಕೆ ಬರುವ ಸಂಕಲ್ಪ ಮಾಡಲು ಕಾರ್ಯಕ್ರಮ ಮಾಡ್ತಿದ್ದೇವೆ. ನಮ್ಮ ಕಾರ್ಯಕರ್ತರು, ಪದಾಧಿಕಾರಿಗಳಿಗೆ ಕರೆ ಕೊಟ್ಟಿದ್ದೇವೆ. ಕಾರ್ಯಕರ್ತರಲ್ಲಿ ಬಹಳಷ್ಟು ಉತ್ಸಾಹ ಇದೆ ಎಂದು ತಿಳಿಸಿದ್ರು. ಜನ ಸಂಕಲ್ಪ ಯಾತ್ರೆ ಯಾಶಸ್ವಿಯಾಗಲಿದೆ. ಭಾರತ್ ಜೋಡೋ ಬಗ್ಗೆ ತಲೆ ಕಡೆಸಿಕೊಂಡಿಲ್ಲ. ಆ ಜೋಡೋ ಯಾತ್ರೆ ಯಾರನ್ನ ಜೋಡಿಸುತ್ತಿದೆ, ಯಾರನ್ನ ತೋಡುತ್ತಿದೆ ಅದೆಲ್ಲಾ ಜಗ್ಗತಿಗೆ ಗೊತ್ತಿದೆ. ನಾವು ಚುನಾವಣೆ ಗೆಲ್ಲುವ ಸಂಕಲ್ಪ ಯಾತ್ರೆ ಮಾಡ್ತಿದ್ದೇವೆ ಎಂದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ 2 ದಿನ ಮಳೆ ಸಾಧ್ಯತೆ