Publish Date: Fri, 14 Aug 2020 (22:12 IST)
Updated Date: Fri, 14 Aug 2020 (22:14 IST)
ಮುಖ್ಯಮಂತ್ರಿಗೆ ಕೆಟ್ಟ ಹೆಸರು ತರಬೇಕು ಎಂದು ಕಾಂಗ್ರೆಸ್ ಉದ್ದೇಶಹೊಂದಿದೆ.
ಹೀಗಂತ ರಾಜ್ಯದ ಸಚಿವ ಸಿ.ಸಿ.ಪಾಟೀಲ್ ದೂರಿದ್ದು, ರಾಜ್ಯದಲ್ಲಿ ಅಶಾಂತಿ ಸೃಷ್ಟಿ ಮಾಡಿ ಮುಖ್ಯಮಂತ್ರಿ ಬಿ .ಎಸ್. ಯಡಿಯೂರಪ್ಪ ಅವರಿಗೆ ಕೆಟ್ಟ ಹೆಸರು ತರಬೇಕು ಎನ್ನುವುದೇ ಕಾಂಗ್ರೆಸ್ ಉದ್ದೇಶವಾಗಿದೆ ಎಂದು ಟೀಕೆ ಮಾಡಿದ್ದಾರೆ.
ಬೆಂಗಳೂರು ಗಲಭೆ ಕೇಸ್ ನ ತನಿಖೆ ನಂತರ ಕಾಂಗ್ರೆಸ್ ಮುಖ ಕಳಚಿ ಬೀಳುತ್ತದೆ. ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಮಾಡಿದವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು.
ಉತ್ತರ ಪ್ರದೇಶ ಸರಕಾರದ ಕ್ರಮದ ಮಾದರಿಯಲ್ಲಿ ವಸೂಲಿ ಮಾಡಬೇಕು ಎನ್ನುವ ಕುರಿತು ಚರ್ಚೆ ನಡೆಯುತ್ತಿದೆ ಎ೦ದು ಸಚಿವ ಸಿ.ಸಿ.ಪಾಟೀಲ್ ಹೇಳಿದ್ದಾರೆ.