Publish Date: Wed, 26 Feb 2020 (19:15 IST)
Updated Date: Wed, 26 Feb 2020 (19:17 IST)
ರಾಜ್ಯದಲ್ಲಿ ಯಾವ ಸೂಪರ್ ಸಿಎಂ ಇಲ್ಲ. ಸಿಎಂ ಬಿ.ಎಸ್.ಯಡಿಯೂರಪ್ಪ ಗೆ ವಯಸ್ಸಾಗಿದೆ ಎಂದು ಅನಾಮಧೇಯ ಪತ್ರ ಬರೆಯಲಾಗಿದೆ.
ಇದನ್ನು ವಿರೋಧ ಪಕ್ಷದವರು ಹಾಗೂ ಪಕ್ಷದ ವಿರೋಧಿಗಳು ಹುಟ್ಟು ಹಾಕಿದ ಸುಳ್ಳು ಸುದ್ದಿ. ಯಡಿಯೂರಪ್ಪ ಸಬಲರು ಸಧೃಡರು ಆಗಿದ್ದಾರೆ. ಎಲ್ಲ ಕೆಲಸ ಮಾಡುವ ಶಕ್ತಿ ಅವರಿಗಿದೆ. ಹೀಗಂತ ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಯಡಿಯೂರಪ್ಪ ಅವರಿಗೆ ಸೂಪರ್ ಸಿಎಂ ಎನ್ನುವ ಪ್ರಶ್ನೆ ಉದ್ಭವ ಆಗಲ್ಲ. ಎಲ್ಲ ಕಾರ್ಯದಲ್ಲಿ ಸ್ವತಂತ್ರ ನಿರ್ಣಯ ತೆಗೆದು ಕೊಳ್ಳಲು ಸಮರ್ಥರಾಗಿದ್ದಾರೆ. ಯಡಿಯೂರಪ್ಪಗೆ ವಯಸ್ಸಾಗಿದೆ ಎಂದು ಅನಾಮಧೇಯ ಪತ್ರ ಬರೆಯಲಾಗಿದೆ.
ಅದಕ್ಕೆ ಯಾವುದೇ ಬೆಲೆ ಕೊಡೋ ಅವಶ್ಯಕತೆ ಇಲ್ಲ ಎಂದು ಡಿಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಹೇಳಿದ್ದಾರೆ.