Select Your Language

Notifications

webdunia
webdunia
webdunia
webdunia

ಸ್ವಾಮೀಜಿ ಆತ್ಮಹತ್ಯೆ ಕೇಸ್​​​ನ ತನಿಖೆ ಚುರುಕು

ಸ್ವಾಮೀಜಿ ಆತ್ಮಹತ್ಯೆ ಕೇಸ್​​​ನ ತನಿಖೆ ಚುರುಕು
ರಾಮನಗರ , ಗುರುವಾರ, 27 ಅಕ್ಟೋಬರ್ 2022 (17:19 IST)
ರಾಮನಗರದ ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಕೇಸ್​​​ನ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. 
ಶ್ರೀಗಳಿಗೆ ಹನಿಟ್ರ್ಯಾಪ್ ಮಾಡಿದ್ದ ಯುವತಿಯ ಪೋನ್ ನಂಬರ್​ನ್ನು ಪೋಲಿಸರು ಕಲೆಕ್ಟ್ ಮಾಡಿಕೊಂಡಿದ್ದಾರೆ. ಬಂಡೆಮಠದ ಸ್ವಾಮೀಜಿಯನ್ನು ವಿಡಿಯೋ ಮೂಲಕ ಬ್ಲ್ಯಾಕ್‌ ಮೇಲ್‌ ಮಾಡಿರೋದು ಕನ್ಫರ್ಮ್‌ ಆಗಿದ್ದು, ‘ಸೆಕ್ಸಾನಂದಾ ಸ್ವಾಮೀಜಿ’ ಎಂದು ಬ್ಲ್ಯಾಕ್‌ ಮೇಲ್‌ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಯುವತಿ ಜೊತೆಗಿನ ವಿಡಿಯೋ ಚಾಟಿಂಗ್​​​​​ನಲ್ಲಿ ಬ್ಲ್ಯಾಕ್‌ಮೇಲ್‌ ಮಾಡಿರುವುದು ಬಯಲಾಗಿದೆ. ಸ್ವಾಮೀಜಿಗೆ ವಿಡಿಯೋ ತೋರಿಸಿ ಹಣಕ್ಕೆ ಬೇಡಿಕೆ ಇಡಲಾಗಿತ್ತಂತೆ. ಬೆಂಗಳೂರು ಮೂಲದ ಯುವತಿಯ ಜಾಡು ಹಿಡಿದು ಪೊಲೀಸರು ಹೊರಟಿದ್ದಾರೆ. ಮತ್ತೊಂದು ಕಡೆ ಬಸವಲಿಂಗ ಶ್ರೀಗಳ ಡ್ರೈವರ್ ಹಾಗೂ ಮಠದ ಕೆಲವು ಸಿಬ್ಬಂದಿಗಳ ಪೋನ್ ವಶಕ್ಕೆ ಪಡೆದು, ಕುದೂರು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಯುವತಿ ಹಾಗೂ ಶ್ರೀಗಳ ನಡುವಿನ ವಿಡಿಯೋ ಕೆಲ ಮಠದ ಸಿಬ್ಬಂದಿಗಳ ಬಳಿ ಇದೆ. ಪೋಲಿಸರು 3 ತಿಂಗಳಿಂದ ಶ್ರೀಗಳಿಗೆ ಬರ್ತಿದ್ದ ಪೋನ್ ಕಾಲ್ ಮೇಲೆ ನಿಗಾ ಇಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಡ್ ಬುಷ್ ಚಿತ್ರದ ಬಗ್ಗೆ ಸಚಿವರ ಅಪಸ್ವರ