Select Your Language

Notifications

webdunia
webdunia
webdunia
webdunia

‘ಖರ್ಗೆಯವರನ್ನ ತನಿಖೆಗೆ ಒಳಪಡಿಸಿ’

‘ಖರ್ಗೆಯವರನ್ನ ತನಿಖೆಗೆ ಒಳಪಡಿಸಿ’
bangalore , ಸೋಮವಾರ, 25 ಏಪ್ರಿಲ್ 2022 (18:27 IST)
PSI ಅಕ್ರಮದ ಬಗ್ಗೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆಡಿಯೋವೊಂದು ಬಿಡುಗಡೆ ಮಾಡಿದ್ದಾರೆ..ಜೊತೆಗೆ ಈ ಅಕ್ರಮದ ಬಗ್ಗೆ ತನಿಖೆ ನಡೆಯಬೇಕು ಅಂತ ಒತ್ತಾಯಿಸಿದ್ದಾರೆ. ಸರ್ಕಾರಕ್ಕೆ ಮಾಹಿತಿ ನೀಡಿ ಈ ಅಕ್ರಮ ಎಸಗಿದ್ದಾರೆ ಅಂತ ಹೇಳಿದ್ದರು.. ಆದ್ರೀಗ ಇವರ ವಿರುದ್ಧವೇ ಬಿಜೆಪಿ ಬಾಣ ಬೀಸಿದೆ. ಸಚಿವ ಸುನೀಲ್ ಕುಮಾರ್, ಪ್ರಿಯಾಂಕ್ ಖರ್ಗೆಯನ್ನೇ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿದ್ದಾರೆ. ಈ ಪ್ರಕರಣದ ತನಿಖೆ ಪೂರ್ಣವಾಗಬೇಕಾದ್ರೆ ಪ್ರಿಯಾಂಕ್ ಖರ್ಗೆಯನ್ನು ತನಿಖೆಗೆ ಒಳಪಡಿಸಬೇಕು. ಇಲ್ಲವಾದರೆ ತನಿಖೆ ಪೂರ್ಣವಾಗಲ್ಲ ಅಂತ ಇಂಧನ ಸಚಿವ ಸುನೀಲ್ ಕುಮಾರ್ ಹೇಳಿಕೆ ನೀಡಿದ್ದಾರೆ..ಕಾಂಗ್ರೆಸ್ ಶಾಸಕರು, ಮಾಜಿ ಸಚಿವರು ಆದ ಪ್ರಿಯಾಂಕ್ ಖರ್ಗೆಯವರು ಈ ಪ್ರಕರಣದಲ್ಲಿ ಆಡಿಯೋ ಬಾಂಬ್ ಸ್ಫೋಟಿಸಿದ್ದೇ ನೆ ಎಂದು ಹೇಳುತ್ತಿದ್ದಾರೆ. ಆದರೆ ಹಗರಣದಲ್ಲಿ ಸಿಕ್ಕಿ ಬೀಳುತ್ತಿರುವ ಆರೋಪಿಗಳೆಲ್ಲರೂ ಅವರ ಮನೆ ಸುತ್ತ ಗಿರಕಿ ಹೊಡೆಯುವವರೇ ಆಗಿದ್ದಾರೆ..ಹೀಗಾಗಿ ಮೊದಲು ಅವರನ್ನ ತನಿಖೆಗೆ ಒಳಪಡಿಸಿ ಎಂದು ಸುನೀಲ್ ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರೋಪಿ ಸೌಮ್ಯ ಅರೆಸ್ಟ್