Publish Date: Mon, 25 Apr 2022 (18:15 IST)
Updated Date: Mon, 25 Apr 2022 (18:23 IST)
545 PSI ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ವಿಚಾರಕ್ಕೆ ಸಂಬಂಧಿಸಿ ಸಿಐಡಿ ಅಧಿಕಾರಿಗಳ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ..ಪ್ರಕರಣದ ಕಿಂಗ್ಪಿನ್ ಆಗಿರುವ ರುದ್ರಗೌಡ ಪಾಟೀಲ್ ಕೊವಿಡ್ನಿಂದ ಮೃತಪಟ್ಟ ನೌಕರ ಲಕ್ಷ್ಮೀ ಪುತ್ರ ಎಂಬುವರ ಮೊಬೈಲ್ ಬಳಸಿದ್ದಾನೆ..ಜೊತೆಗೆ ತನ್ನ ಬಳಿಯೇ ಮೊಬೈಲ್ ಇಟ್ಟುಕೊಂಡಿದ್ದ ರುದ್ರಗೌಡ, ಅದೇ ಮೊಬೈಲ್ನಿಂದ ನೇಮಕಾತಿಯಲ್ಲಿ ಅಕ್ರಮವೆಸಗಿದ್ದಾನೆ.. ಆರೋಪಿಗಳು ನೇಮಕಾತಿ ಅಕ್ರಮಕ್ಕೆ ಬೇರೆಯವರ ಮೊಬೈಲ್ ಬಳಸಿದ್ದಾರೆ. ತಮ್ಮ ಮೊಬೈಲ್ ಬಳಸಿದರೆ ಸಿಕ್ಕಿ ಹಾಕಿಕೊಳ್ಳುತ್ತೇವೆ ಅಂತ ಬೇರೆಯವರ ನಂಬರ್ ಬಳಸಿದ್ದಾರೆ..ಡೀಲ್ ಮಾಡುವಾಗಲೇ ಬೇರೆಯವರ ಹೆಸರಲ್ಲಿ ಇರುವ ಸಿಮ್ ತರಬೇಕು ಅಂತ ಕಿಂಗ್ಪಿನ್ಗಳು ಹೇಳುತ್ತಿದ್ದರು..ಇದಕ್ಕೆ ಸಂಬಂಧಪಟ್ಟಂತೆ ವಿಚಾರಣೆ ಮತ್ತಷ್ಟು ತೀವ್ರಗೊಂಡಿದೆ.