Select Your Language

Notifications

webdunia
webdunia
webdunia
webdunia

ಇಬ್ಬರು ದಲಿತರ ಹತ್ಯೆಗೈದ 13 ಮಂದಿ ಬಂಧನ

ಇಬ್ಬರು ದಲಿತರ ಹತ್ಯೆಗೈದ 13 ಮಂದಿ ಬಂಧನ
bengaluru , ಸೋಮವಾರ, 25 ಏಪ್ರಿಲ್ 2022 (16:23 IST)

ಗುಬ್ಬಿ ತಾಲೂಕಿನ ಪೆದ್ದನಹಳ್ಳಿ ಗ್ರಾಮದ ಇಬ್ಬರು ದಲಿತ ಯುವಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತ ಪೊಲೀಸರು 13 ಮಂದಿಯನ್ನು ಬಂಧಿಸಿದ್ದಾರೆ.

ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಗೆ ಸಂಬಂಧಿಸಿದ ವಿವಿಧ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅವರೆಲ್ಲರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಪ್ರಮುಖ ಆರೋಪಿ ನಂದೀಶ್ ಎಂಬಾತನ ಜೊತೆ ಸೇರಿದ ಇತರ ಆರೋಪಿಗಳು ಗಿರೀಶ್ ಮೂಡಲಗಿರಿಯಪ್ಪ ಮತ್ತು ಗಿರೀಶ್ ಕೆಂಪಣ್ಣ ಎಂಬುವರನ್ನು ಹತ್ಯೆ ಮಾಡಿದ್ದರು.

ಗಿರೀಶ್ ಮೂಡಲಗಿರಿಯಪ್ಪ ಅವರ ಮನೆಗೆ ಬಂದಿದ್ದ ನಂದೀಶ್ ಗ್ರಾಮದ ಹೊರವಲಯಕ್ಕೆ ಕರೆದುಕೊಂಡು ಬಂದಿದ್ದ. ಸಂತ್ರಸ್ತರು ತಪ್ಪಿಸಿಕೊಳ್ಳದಂತೆ ತಡೆಯಲು ಅವರ ಕಾಲುಗಳಿಗೆ ಬೆಂಕಿ ಹಚ್ಚಿದ್ದರು. ಮೂಡಲ ಗಿರಿಯಪ್ಪ ಅವರ ಅಣ್ಣ ಶ್ರೀಧರ್ ಅವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ಹಿಜಾಬ್ ನಂತರ ಬೈಬಲ್ ವಿವಾದ!