Select Your Language

Notifications

webdunia
webdunia
webdunia
webdunia

ಮಧ್ಯಂತರ ಚುನಾವಣೆ; ಸಿದ್ದರಾಮಯ್ಯ ಹೊರಹಾಕಿದ ಸ್ಫೋಟಕ ಮಾಹಿತಿ ಏನು?

ಮಧ್ಯಂತರ ಚುನಾವಣೆ; ಸಿದ್ದರಾಮಯ್ಯ ಹೊರಹಾಕಿದ ಸ್ಫೋಟಕ ಮಾಹಿತಿ ಏನು?
ಮೈಸೂರು , ಸೋಮವಾರ, 24 ಜೂನ್ 2019 (20:53 IST)
ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರದ ಭವಿಷ್ಯ ಹಾಗೂ ಮಧ್ಯಂತರ ಚುನಾವಣೆ ಕುರಿತು ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸ್ಪೋಟಕ ಮಾಹಿತಿ ಹೊರಹಾಕಿದ್ದಾರೆ.

ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವುದಿಲ್ಲ. ಹಾಲಿ ಅಸ್ತಿತ್ವದಲ್ಲಿ ಕಾಂಗ್ರೆಸ್ – ಜೆಡಿಎಸ್ ಸರಕಾರವೇ ಉಳಿದ ಅವಧಿಯನ್ನು ಪೂರೈಸಲಿದೆ. ಹೀಗಂತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ಮುಖಂಡರು ಬಹಳ ದಿನಗಳಿಂದ ಸರಕಾರ ಬೀಳುತ್ತಲೇ ಎಂದು ಹೇಳಿಕೊಂಡು ಬರುತ್ತಲೇ ಇದ್ದಾರೆ. ಆದರೆ ಅವರ ಹೇಳಿಕೆ ಯಾವತ್ತಿಗೂ ನಿಜವಾಗಿಲ್ಲ. ಹೀಗಂತ ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದ್ದಾರೆ.

ಸರಕಾರ ಪತನಗೊಳ್ಳುತ್ತದೆ. ಆ ಬಳಿಕ ನಾವೇ ಸರಕಾರ ರಚನೆ ಮಾಡುತ್ತೇವೆ ಎಂದು ಯಡಿಯೂರಪ್ಪ ಕನಸು ಕಾಣುತ್ತಿದ್ದಾರೆ. ಅವರ ಕನಸುಗಳಿಗೆ ಉತ್ತರ ನೀಡೋದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಹೆಚ್.ಡಿ.ದೇವೇಗೌಡರು ಮಧ್ಯಂತರ ಚುನಾವಣೆ ನಡೆಯುತ್ತೆ ಎಂದ ಬೆನ್ನಲ್ಲೇ ಸಿದ್ದರಾಮಯ್ಯರ ಈ ಹೇಳಿಕೆ ಸರಕಾರಕ್ಕೆ ತುಸು ಆಸರೆಯಾಗಿದೆ ಎನ್ನಲಾಗುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮುಖ್ಯಮಂತ್ರಿಗೆ ಹೃದಯಾಘಾತ: ಬಿಗ್ ಶಾಕಿಂಗ್ ನ್ಯೂಸ್