Select Your Language

Notifications

webdunia
webdunia
webdunia
webdunia

ಕಳ್ಳನ ಬಂಧನ ಮಾಡಿದ್ದಕ್ಕೆ ಇನ್ಸಪೆಕ್ಟರ್, ಪೊಲೀಸರಿಗೆ ಕ್ವಾರಂಟೈನ್

ಕಳ್ಳನ ಬಂಧನ ಮಾಡಿದ್ದಕ್ಕೆ ಇನ್ಸಪೆಕ್ಟರ್, ಪೊಲೀಸರಿಗೆ ಕ್ವಾರಂಟೈನ್
ಬೆಂಗಳೂರು , ಬುಧವಾರ, 20 ಮೇ 2020 (19:23 IST)
ಕಳ್ಳನೊಬ್ಬನನ್ನು ಬಂಧಿಸಿದ ಕಾರಣಕ್ಕಾಗಿ ಇನ್ಸಪೆಕ್ಟರ್ ಹಾಗೂ 15 ಪೊಲೀಸರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ಕೊರೊನಾ ಪಾಸಿಟಿವ್ ಇದ್ದ ಕಳ್ಳನೊಬ್ಬ ಕಬ್ಬಿಣ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ. ಸ್ಥಳೀಯರು ಸಿಕ್ಕಿಬಿದ್ದ ಕಳ್ಳನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದರು.

ಬೆಂಗಳೂರಿನ ಹೆಬ್ಬಗೋಡಿ ಠಾಣೆಯ ಪೊಲೀಸರು ಕಳ್ಳನನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.
ಕಳ್ಳ ಪಾದರಾಯನಪುರದವನು ಎನ್ನುವ ವಿಷಯ ಗೊತ್ತಾಗುತ್ತಲೇ ಆತನ ವೈದ್ಯಕೀಯ ಪರೀಕ್ಷೆ ಮಾಡಿಸಲಾಯಿತು. ಆಗ ಕೊರೊನಾ ಇರೋದು ಗೊತ್ತಾಗಿದೆ.

ಕಳ್ಳನನ್ನು ಬಂಧಿಸಿರುವ ಪೊಲೀಸರಿಗೆ ಕೊರೊನಾ ಆತಂಕ ಶುರುವಾಗಿ, ಕ್ವಾರಂಟೈನ್ ಮಾಡಲಾಗಿದ್ದರೆ, ನ್ಯಾಯಾಧೀಶರಿಗೂ ಕಳ್ಳನಿಂದ ಕೊರೊನಾ ಆತಂಕ ಆರಂಭಗೊಂಡಿದೆ ಎನ್ನಲಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ನಟ್ಟ ನಡುರಾತ್ರಿ ಹುಲಿಯನ್ನೇ ಹಿಡಿದದ್ದು ಹೇಗೆ?