Select Your Language

Notifications

webdunia
webdunia
webdunia
webdunia

ಜಂಬೂಸವಾರಿ ವೇಳೆ ವಾಲಿದ ಅಂಬಾರಿ; ತಪ್ಪಿದ ಅವಘಡ

ಜಂಬೂಸವಾರಿ ವೇಳೆ ವಾಲಿದ ಅಂಬಾರಿ; ತಪ್ಪಿದ ಅವಘಡ
ಮೈಸೂರು , ಬುಧವಾರ, 9 ಅಕ್ಟೋಬರ್ 2019 (11:10 IST)
ಮೈಸೂರು : ದಸರಾ ಮಹೋತ್ಸವದ ಪ್ರಯಕ್ತ ನಿನ್ನೆ ನಡೆದ ಜಂಬೂಸವಾರಿ ವೇಳೆಯಲ್ಲಿ ಅರ್ಜುನ ಹೊತ್ತಿದ್ದ ಅಂಬಾರಿ ವಾಲಿದ ಘಟನೆ ನಡೆದಿದೆ.




ನಿನ್ನೆ ನಡೆದ ಮೈಸೂರು ದಸರಾದಲ್ಲಿ ಜಂಬೂಸವಾರಿಯ ವೇಳೆ ಅಂಬಾರಿ ವಾಲಿದ್ದು, ಅದನ್ನು ಸರಿ ಮಾಡಲು ಗಜಪಡೆ ಬಳಿ ಇದ್ದ ಸಿಬ್ಬಂದಿಗೆ ರಾಜಮಾತೆ ಪ್ರಮೋದಾದೇವಿ ಕೈಸನ್ನೆ ಮಾಡಿ ತಿಳಿಸಿದ್ದರು. ಈ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಂತರ ಹಗ್ಗದ ಸಹಾಯದಿಂದ ಅಂಬಾರಿಯನ್ನು ಹಿಡಿದುಕೊಳ್ಳಲಾಯಿತು.


ಅರ್ಜುನನ ಹೆಗಲ ಮೇಲೆ ಅಂಬಾರಿಯನ್ನು ಕೂರಿಸುವ ವೇಳೆಯಲ್ಲಿ ಸ್ಥಳದಲ್ಲಿದ್ದ ಜನತೆ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದು, ಇದರಿಂದ ಅರ್ಜುನ  ಬೆಚ್ಚಿಬದ್ದ ಕಾರಣ ಅಂಬಾರಿ ವಾಲಿದೆ ಎನ್ನಲಾಗಿದೆ. ಈ ವೇಳೆ ಅರ್ಜುನನ ಮಾವುತ ವಿನು ಜನರ ಮೇಲೆ ಕೋಪಗೊಂಡಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿ ಅಕ್ರಮ ಹಣ ಪ್ರಕರಣ; ಕೆ ಎನ್​​ ರಾಜಣ್ಣಗೆ ಸಮನ್ಸ್ ನೀಡಿದ ಇಡಿ ಅಧಿಕಾರಿಗಳು