Publish Date: Tue, 08 Oct 2019 (14:33 IST)
Updated Date: Tue, 08 Oct 2019 (14:35 IST)
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಜಂಬೂ ಸವಾರಿ ನೋಡುಗರ ಕಣ್ಮನ ಸೆಳೆಯುವಲ್ಲಿ ಸಫಲವಾಗಿದೆ.
ಮೈಸೂರಿನ ಪರಂಪರೆ, ಇತಿಹಾಸ ಅಲ್ಲದೇ ಗತವೈಭವವನ್ನು ಸಾರುವ ಚಾಮುಂಡಿ ದೇವಿಯ ವೈಭವದ ಜಂಬೂ ಸವಾರಿ ಮೆರವಣಿಗೆ ಆಕರ್ಷಕವಾಗಿ ನಡೆಯಿತು.
ಸಿಎಂ ಬಿ.ಎಸ್.ಯಡಿಯೂರಪ್ಪ, ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡೋ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದ್ರು.
ದಸರಾ ಮಹೋತ್ಸವ, ಸಂಭ್ರಮದಲ್ಲಿ ಲಕ್ಷಾಂತರ ಜನರು ಭಾಗಿಯಾಗಿ ಸಂತಸಗೊಂಡಿದ್ದಾರೆ. ಜಂಬೂ ಸವಾರಿ ಮೆರವಣಿಗೆ ನಡೆಯೋ ಮೂಲಕ ದಸರಾ ಸಮಾಪ್ತಿಯಾಗುತ್ತದೆ.