Select Your Language

Notifications

webdunia
webdunia
webdunia
webdunia

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಸಿಎಂ ಗೆ ಕಗ್ಗಂಟಾಗುತ್ತಾ?

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಸಿಎಂ ಗೆ ಕಗ್ಗಂಟಾಗುತ್ತಾ?
ಬೆಂಗಳೂರು , ಬುಧವಾರ, 12 ಫೆಬ್ರವರಿ 2020 (10:18 IST)
ಬೆಂಗಳೂರು : ಖಾತೆ ಹಂಚಿಕೆ ಬಳಿಕ ಇದೀಗ ಸಿಎಂ ಬಿಎಸ್ ವೈ ಗೆ ಜಿಲ್ಲಾ ಉಸ್ತುವಾರಿ ನೇಮಕ ತಲೆನೋವು ಶುರುವಾಗಿದ್ದು,  ಸಿಎಂ ಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡುವುದು ಒಂದು ಸವಾಲಾಗಿದೆ.

ಹಿರಿಯ ಸಚಿವರಿಗೆ ಯಾವುದೇ ರೀತಿಯ ಬೇಸರವಾಗದಂತೆ ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ನೀಡುವುದು ಹಾಗೂ  ಬೆಂಗಳೂರು, ಬಳ್ಳಾರಿ, ಹಾವೇರಿ, ಬೆಳಗಾವಿ ಜಿಲ್ಲೆಗಳಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡುವುದು ಸಿಎಂ  ಬಿಎಸ್ ವೈ ಗೆ ದೊಡ್ಡ ಸವಾಲಾಗಿದೆ.

 

ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ಹಲವರಿಂದ ಪೈಪೋಟಿ ನಡೆಯುತ್ತಿದ್ದು, ಬೆಂಗಳೂರು ನಗರ ಜಿಲ್ಲೆಗೆ ಅಶೋಕ್, ಅಶ್ವತ್ಥ್ ನಾರಾಯಣ, ನೂತನ ಸಚಿವರಾದ ಗೋಪಾಲಯ್ಯ, ಭೈರತಿ ಬಸವರಾಜ್ , ಎಸ್ ಟಿ ಸೋಮಶೇಖರ್ ಮಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

 

ಬಳ್ಳಾರಿ ಜಿಲ್ಲಾ ಉಸ್ತುವಾರಿಯನ್ನು ಆನಂದ್ ಸಿಂಗ್ ಗೆ ನೀಡಿದ್ರೆ  ಶ್ರೀರಾಮುಲು ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಬಹುದು. ಹಾವೇರಿ ಜಿಲ್ಲಾ ಉಸ್ತುವಾರಿಗಾಗಿ ಬಿ.ಸಿ.ಪಾಟೀಲ್ ಬೇಡಿಕೆ ಇಟ್ಟಿದ್ದು, ಸದ್ಯ ಬಸವರಾಜ್ ಬೊಮ್ಮಾಯಿಗೆ ಉಸ್ತುವಾರಿ ನೀಡಲಾಗಿದೆ. ಹೀಗಾಗಿ ಹಾವೇರಿ ಜಿಲ್ಲಾ ಉಸ್ತುವಾರಿ ಸಹ ಕಗ್ಗಂಟಾಗಬಹುದು. ಹೀಗೆ ಕೆಲ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರ ನೇಮಕ ಸಿಎಂ ಗೆ ಕಗ್ಗಂಟಾಗಲಿದೆ ಎನ್ನಲಾಗಿದೆ.-

 


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ವೈರಸ್ ಗೆ ಅಧಿಕೃತ ಹೆಸರಿಟ್ಟ ವಿಶ್ವ ಆರೋಗ್ಯ ಸಂ‍ಸ್ಥೆ