Publish Date: Thu, 16 Aug 2018 (17:45 IST)
Updated Date: Thu, 16 Aug 2018 (17:49 IST)
ವಿದ್ಯುತ್ ಅವಘಡಕ್ಕೆ ಮನೆಯೊಂದು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.
ಮನೆಯೊಂದರಲ್ಲಿ ವಿದ್ಯುತ್ ಶಾರ್ಟ ಸಕ್ರ್ಯೂಟ್ ಪರಿಣಾಮ ಮನೆ ಭಸ್ಮವಾಗಿರುವ ಘಟನೆ ನಡೆದಿದೆ.
ನೆಲಮಂಗಲ ಸಮೀಪದ ಮಲ್ಲಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ವಿದ್ಯುತ್ ಬಂದ ತಕ್ಷಣ ಮನೆಯ ಟಿ.ವಿ ಆನ್ ಮಾಡಿದ ತತ್ ಕ್ಷಣವೇ ವಿದ್ಯುತ್ ಶಾರ್ಟ ಸಕ್ರ್ಯೂಟ್ ಆದ ಘಟನೆ ನಡೆದಿದೆ. ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಲ್ಲಾಪುರ ಗ್ರಾಮದ ಹುಚ್ಚಯ್ಯ ಹಾಗೂ ಭಾಗ್ಯಮ್ಮ ಎಂಬುವರಿಗೆ ಸೇರಿದ ಮನೆ ಬೆಂಕಿಗೆ ಆಹುತಿಯಾಗಿದೆ.
ಮನೆಯಲ್ಲಿನ ಗೃಹಪಯೋಗಿ ವಸ್ತುಗಳು ಸೇರಿದಂತೆ ಬೆಲೆ ಬಾಳುವ ವಸ್ತುಗಳು ಸಹ ನಾಶವಾಗಿದೆ. ಇನ್ನೂ ಹುಚ್ಚಯ್ಯರ ಕುಟುಂಬಕ್ಕೆ ಸುಮಾರು ಎರಡು ಲಕ್ಷ ಮೌಲ್ಯದ ನಷ್ಟ ಆಗಿದ್ದು, ಬಡ ಕುಟುಂಬ ಸಂಕಷ್ಟಕ್ಕಿಡಾಗಿದೆ. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ರ್ದುಘಟನೆ ನಡೆದಿದೆ.