Select Your Language

Notifications

webdunia
webdunia
webdunia
webdunia

ಕರ್ನಾಟಕದಲ್ಲಿ ಕಾಲಾ ಚಿತ್ರಕ್ಕೆ ಎದುರಾದ ಸಂಕಷ್ಟ ವಿಶ್ವ ರೂಪಂ -2 ಚಿತ್ರಕ್ಕೂ ಎದುರಾಗಲಿದೆಯಾ?

ಕರ್ನಾಟಕದಲ್ಲಿ  ಕಾಲಾ ಚಿತ್ರಕ್ಕೆ ಎದುರಾದ ಸಂಕಷ್ಟ ವಿಶ್ವ ರೂಪಂ -2 ಚಿತ್ರಕ್ಕೂ ಎದುರಾಗಲಿದೆಯಾ?
ಚೆನ್ನೈ , ಸೋಮವಾರ, 6 ಆಗಸ್ಟ್ 2018 (06:46 IST)
ಚೆನ್ನೈ : ಈ ಹಿಂದೆ ನಟ ರಜನೀಕಾಂತ್ ‘ಕಾಲಾ’ ಚಿತ್ರಕ್ಕೆ ಎದುರಾದ ಸಂಕಷ್ಟವೇ ಇದೀಗ ನಟ ಕಮಲ್ ಹಾಸನ್ ಅವರ ವಿಶ್ವ ರೂಪಂ -2 ಸಿನಿಮಾಕ್ಕೂ ಎದುರಾಗಲಿದೆಯಾ ಎಂಬ ಅನುಮಾನ ಎಲ್ಲಾ ಕಡೆ ವ್ಯಕ್ತವಾಗುತ್ತಿದೆ.


ಹೌದು ಕೆಲವು ದಿನಗಳ ಹಿಂದೆ ರಜನಿಕಾಂತ್ ಕಾವೇರಿ ವಿಚಾರವಾಗಿ ನೀಡಿದ್ದ ಹೇಳಿಕೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿ, ಕರ್ನಾಟಕದಲ್ಲಿ ಕಾಲಾ ಚಿತ್ರ ಬಿಡುಗಡೆಯಾಗದಂತೆ ಬಾರೀ ವಿರೋಧ ವ್ಯಕ್ತಪಡಿಸಿದ್ದರು. ಅದೇರೀತಿ ಇದೀಗ ಕಮಲ್ ಹಾಸನ್ ಅವರ ವಿಶ್ವ ರೂಪಂ -2 ಸಿನಿಮಾಕ್ಕೂ ಇದೇ ಪರಿಸ್ಥಿತಿ ಎದುರಾಗಬಹುದಾ ಎಂಬ ಅನುಮಾನ ಮೂಡಿದೆ.


ವಿಶ್ವರೂಪಂ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದಂತ ಸಿನಿಮಾ. 5 ವರ್ಷಗಳ ನಂತರ ಬಿಡುಗಡೆಯಾಗುತ್ತಿರುವ ವಿಶ್ವರೂಪಂ-2 ಮೇಲೆ ಸಾಕಷ್ಟು ನಿರೀಕ್ಷೆಗಳಿವೆ ಎನ್ನಬಹುದು. ಆದರೆ ಇತ್ತೀಚೆಗಷ್ಟೇ ಕಮಲ್ ಹಾಸನ್ ಕೂಡ  ಕಾವೇರಿ ನೀರಿನ ವಿಚಾರವಾಗಿ ಕರ್ನಾಟಕದ ವಿರುದ್ಧ ಮಾತನಾಡಿದ್ದರು. ಆದಕಾರಣ ಈ ಸಿನಿಮಾ ಕೂಡ ರಾಜ್ಯದಲ್ಲಿ ಬಿಡುಗಡೆಯಾಗುವುದೋ ಇಲ್ಲವೋ ಎಂಬ ಅನುಮಾನ ಶುರುವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆಸಿಡ್ ದಾಳಿಗೊಳಗಾದವರಿಗೆ ಸಹಾಯ ಮಾಡಿ ಎಂದ ನಟ ಶಾರುಖ್ ಖಾನ್