Select Your Language

Notifications

webdunia
webdunia
webdunia
webdunia

ಜೈಲಲ್ಲಿ ಕೈದಿ ಸಾವಿಗೀಡಾದರೆ ಕುಟುಂಬಕ್ಕೆ ಪರಿಹಾರ ಸರ್ಕಾರ

ಜೈಲಲ್ಲಿ ಕೈದಿ ಸಾವಿಗೀಡಾದರೆ ಕುಟುಂಬಕ್ಕೆ ಪರಿಹಾರ ಸರ್ಕಾರ
bangalore , ಶುಕ್ರವಾರ, 6 ಅಕ್ಟೋಬರ್ 2023 (19:37 IST)
ಜೈಲುಗಳಲ್ಲಿ ಅಸಹಜವಾಗಿ ಸಾವನ್ನಪ್ಪಿದ ಕೈದಿಗಳ ಸಂಬಂಧಿಕರು ಅಥವಾ ಉತ್ತರಾಧಿಕಾರಿಗಳಿಗೆ ಪರಿಹಾರ ಪಾವತಿಸಲು ನೀತಿಯೊಂದನ್ನು ರೂಪಿಸಲಾಗಿದ್ದು, ಹೊಡೆದಾಟದಿಂದ ಕೈದಿ ಸಾವಿಗೀಡಾದರೆ ಆತನ ಉತ್ತರಾಧಿಕಾರಿಗೆ 7.50 ಲಕ್ಷ ರು., ಆತ್ಮಹತ್ಯೆ ಸೇರಿದಂತೆ ಅಸಹಜವಾಗಿ ಮೃತಪಟ್ಟರೆ ಐದು ಲಕ್ಷ ರು. ಪರಿಹಾರ ನೀಡಲಾಗುವುದು ಎಂದು ರಾಜ್ಯ ಸರ್ಕಾರ  ಹೈಕೋರ್ಟ್‌ಗೆ ಮಾಹಿತಿ ನೀಡಿದೆ.ಸುಪ್ರೀಂ ಕೋರ್ಟ್ 2017ರಲ್ಲಿ ಹೊರಡಿಸಿದ ತೀರ್ಪಿನ ಹಿನ್ನೆಲೆಯಲ್ಲಿ ಜೈಲಿನಲ್ಲಿ ಕೈದಿಗಳ ಅಸಹಜ ಸಾವಿಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನಿನ್ನೆ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

Share this Story:

Follow Webdunia kannada

ಮುಂದಿನ ಸುದ್ದಿ

IAS ಅಧಿಕಾರಿ ರೋಹಿಣಿ ಸಿಂಧೂರಿ ಮೇಲೆ ಗಾಯಕ ಲಕ್ಕಿ ಅಲಿ ಆರೋಪ