Publish Date: Wed, 04 Oct 2023 (18:44 IST)
Updated Date: Wed, 04 Oct 2023 (19:48 IST)
ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ತಾವೇ ಗೆಲ್ಲೋದು ಅಂತ ಹೇಳಿಕೊಂಡು ಒಡಾಡುತ್ತಿದ್ದಾರೆ. ಆದರೆ ಅಷ್ಟೆ ವೇಗದಲ್ಲಿ ಪ್ರಧಾನಿ ವಿರುದ್ಧ ವಾಗ್ಬಾಣಗಳು ತಿರುಗುಬಾಣಗಳಾಗುತ್ತಿವೆ ಎಂದು ಮಾಜಿ ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ಹೇಳಿದರು. ನಗರದ ಉತ್ತರ ಬಡಾವಣೆಯ ತಮ್ಮ ಗೃಹ ಕಚೇರಿಯಲ್ಲಿ ಮಹಿಳಾ ಕಾಂಗ್ರೇಸ್ ಕಾರ್ಯಕರ್ತೆಯರ ಸಭೆಗೂ ಮುನ್ನ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, ಜನಗಣತಿ ಮತ್ತು ಜಾತಿ ಗಣತಿ,ಪ್ರಾದೇಶಿಕ ವಿವಾದಗಳು ಮೋದಿಯವರನ್ನು ಸುತ್ತಿಕೊಳ್ಳುತ್ತಿವೆ. ಹಿಂದುಳಿದ ವರ್ಗಗಳು ಅವರ ಪಕ್ಷದ ವಿರುಧ್ದ ತಿರುಗಿ ಬೀಳುತ್ತವೆ. ನಮ್ಮ ಪಕ್ಷಕ್ಕೆ ಮತಕೊಡಲ್ಲ ಅನ್ನೋ ಕಾರಣಕ್ಕೆ ಜಾತಿ ಗಣತಿ ಬಿಡುಗಡೆ ಮಾಡುತಿಲ್ಲ ಎಂದು ಮೊಯ್ಲಿ ವಿಮರ್ಶಿಸಿದರು.