Select Your Language

Notifications

webdunia
webdunia
webdunia
webdunia

ನಾನು ಸಿದ್ದರಾಮಯ್ಯನ ಅಭಿಮಾನಿ ಎಂದ ಸಚಿವ ರೇವಣ್ಣ

ನಾನು ಸಿದ್ದರಾಮಯ್ಯನ ಅಭಿಮಾನಿ ಎಂದ ಸಚಿವ ರೇವಣ್ಣ
ಹಾಸನ , ಗುರುವಾರ, 16 ಮೇ 2019 (17:08 IST)
ರೇವಣ್ಣ ಅವರಿಗೂ ಸಿಎಂ ಆಗೋ ಅರ್ಹತೆ ಇದೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಚಿವ ಹೆಚ್.ಡಿ.ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಸಿದ್ದರಾಮಯ್ಯ ಅವರು ನನ್ನ ಮೇಲಿನ ಗೌರವದಿಂದ ಹಾಗೆ ಹೇಳಿರಬಹುದು. ಹಿಂದಿನಿಂದಲೂ ಅವರು ನನ್ನ ಹಿತೈಶಿ, ನಾನು ಅವರ ಅಭಿಮಾನಿ ಎಂದರು.

ಅವರ ಅಭಿಪ್ರಾಯದ ಬಗ್ಗೆ ನಾನು ರಿಯಾಕ್ಟ್ ಮಾಡೋಕೆ ಹೋಗಲ್ಲ. ಕುಮಾರಸ್ವಾಮಿ ಸಿಎಂ ಆಗಿರುವಾಗ ನನ್ನ ಪ್ರಶ್ನೆ ಎಲ್ಲಿ ಬರುತ್ತೆ? ಅವರು ಇರೋವಾಗ ನಾವು ಪೈಪೋಟಿಗೆ ಬರುವುದಿಲ್ಲ. ಯಾವ ಹಿನ್ನೆಲೆಯಲ್ಲಿ ಈ ರೀತಿ ಚರ್ಚೆಯಾಗಿದೆಯೋ ಗೊತ್ತಿಲ್ಲ. ನಮ್ಮ ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ ಎಂದರು.

ನಾವು ಅಣ್ಣ- ತಮ್ಮಂದಿರು ಹೊಡೆದಾಡೋ ಪ್ರಶ್ನೆಯೇ ಇಲ್ಲ ಎಂದರು.

ಪ್ರಜ್ವಲ್ ಸುಳ್ಳು ಅಫಿಡವಿಟ್ ಸಲ್ಲಿಕೆ ಆರೋಪ ಕುರಿತು ಪ್ರತಿಕ್ರಿಯಿಸಿದ್ದು, ಒಮ್ಮೆ ಚುನಾವಣಾ ಅಧಿಕಾರಿ ನಾಮಪತ್ರ ಅಂಗೀಕರಿಸಿದ ಮೇಲೆ ತಿರಸ್ಕಾರ ಮಾಡೋ‌ ಹಾಗಿಲ್ಲ. ಹೀಗಂತ ಚುನಾವಣಾ ಆಯೋಗದ ನಿರ್ದೇಶನವೇ ಇದೆ.

ಆಯೋಗ, ಚುನಾವಣಾ ಅಧಿಕಾರಿಗಳು ಯಾವ ಆಧಾರದ ಮೇಲೆ ಹೀಗೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ, ಬೇಕು ಅಂಥ ಕೆಲವರು ಅಪ ಪ್ರಚಾರ ಮಾಡುತ್ತಿದ್ದಾರೆ ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಕಾರ್ ಗಾಜು ಒಡೆದು ಲಕ್ಷ ಲಕ್ಷ ನಗದು ದರೋಡೆ