Webdunia - Bharat's app for daily news and videos

Install App

ಹುಬ್ಬಳ್ಳಿ-ಧಾರವಾಡ ಉತ್ತರಕ್ಕೆ ಮತ್ತೊಂದು ಕ್ರೀಡಾ ಸಂಕೀರ್ಣ ಮಂಜೂರು

Webdunia
ಶುಕ್ರವಾರ, 20 ಜುಲೈ 2018 (14:38 IST)
ಅವಳಿನಗರದ  ನಗರದ ಜನತೆಯ ಬಹು ಅಪೇಕ್ಷಿತ ಹಾಗೂ  ಕ್ರೀಡಾ ಪಟುಗಳ ನಿರೀಕ್ಷಿತ ಹಾಗೂ ಸುಸಜ್ಜಿತ ವಿವಿದ್ದೋದೇಶ "ಕ್ರೀಡಾ ಸಂಕಿರ್ಣ" ಕ್ಕೆ ಕೇಂದ್ರ ಸರ್ಕಾರದಿಂದ  ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ಒಪ್ಪಿಗೆ ದೊರೆತಿದೆ ಎಂದು ಸಂಸದ ಪ್ರಲ್ಹಾದ ಜೋಶಿ  ತಿಳಿಸಿದ್ದಾರೆ.

ನವದೆಹಲಿಯಲ್ಲಿ ಕೇಂದ್ರ ಕ್ರೀಡಾ ಸಚಿವರನ್ನು ಸಂಸತ್ ಆವರಣದಲ್ಲಿ  ಭೇಟಿಯಾದ ಸಂದರ್ಭದಲ್ಲಿ ಸ್ವತಃ ಸಚಿವ ರಾಜವರ್ಧನ ರಾಥೋಡ ಅವರು ಸಂತಸದ ಸುದ್ದಿ ತಿಳಿಸಿದ್ದಾರೆ ಎಂದು ಪ್ರಲ್ಹಾದ ಜೋಶಿ ಹೇಳಿದ್ದಾರೆ. 8 ಕೋಟಿ ರೂ. ಬಿಡುಗಡೆ ಮಾಡಿದ ಕ್ರೀಡಾ ಇಲಾಖೆಯ ಮಂಜೂರಾತಿ ಪತ್ರವನ್ನು ಸಚಿವರು ನೀಡಿದ್ದಾರೆ. ಹಣವನ್ನು ಹಂತ ಹಂತವಾಗಿ ಕರ್ನಾಟಕ ಸರಕಾರದಿಂದ ಕ್ರೀಡಾ ಇಲಾಖೆಗೆ ನೀಡಲಾಗುತ್ತಿದ್ದು, ಯೋಜನೆಯ ಪ್ರಗತಿಯ ಆಧಾರದ ಮೇಲೆ ಹಂತ ಹಂತವಾಗಿ ಹಣ ಬಿಡುಗಡೆ ಆಗಲಿದೆ ಎಂದು ತಿಳಿಸಿದ ಸಂಸದ ಜೋಶಿ, ಮೊದಲ ಹಂತದಲ್ಲಿ ರೂ. 3 ಕೋಟಿ ಬಿಡುಗಡೆ ಗೊಳಿಸಲಾಗುವುದು ಎಂದಿದ್ದಾರೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತಲೆ ಎತ್ತಲಿರುವ ಕ್ರೀಡಾ ಸಂಕಿರ್ಣದಿಂದ ಭಾಗದಲ್ಲಿ ಕ್ರೀಡಾ ಚಟುವಟಿಕೆಗಳು ಗರಿಗೆದರಲಿದ್ದು, ಕ್ರೀಡೆಯಲ್ಲಿ ಸಾಧನೆ ಮಾಡುವ ಗುರಿ ಹೊಂದಿರುವ ಯುವಕರಿಗೆ ಇದೊಂದು ವರದಾನವಾಗಲಿದೆಯೆಂದು ಸಂತಸ ವ್ಯಕ್ತ ಪಡಿಸಿದರು. ಶೀಘ್ರದಲ್ಲಿಯೇ ಇಡೀ ಉತ್ತರ ಕರ್ನಾಟಕವೇ ಹೆಮ್ಮೆ ಪಡುವಂತಹ ಸುಸಜ್ಜಿತ ಕ್ರೀಡಾ ಸಂಕಿರ್ಣ ನಿರ್ಮಾಣ ಗೊಳ್ಳಲಿದೆ.

ಈಗಾಗಲೇ ತೈಲ ಕಂಪನಿಗಳ ನೆರವಿನಿಂದ ಸುಮಾರು 13 ಕೋಟಿ ರೂ. ವೆಚ್ಚದಲ್ಲಿ ಇಂತಹುದೇ ಸುಸಜ್ಜಿತ ಕ್ರೀಡಾ ಸಂಕಿರ್ಣದ ನಿರ್ಮಾಣಕ್ಕೆ ಚಾಲನೆ  ನೀಡಲಾಗಿದ್ದು. ಎರಡೂ ಕ್ರೀಡಾ ಸಂಕೀರ್ಣ ಕಟ್ಟಡ ನಿರ್ಮಾಣ ಪೂರ್ತಿಗೊಂಡಾಗಲೆ ಅವಳಿ ನಗರವೂ ಸೇರಿದಂತೆ ಇಡೀ ಉತ್ತರ ಕರ್ನಾಟಕದ ಕ್ರೀಡಾ ಚಟುವಟಿಕೆಗಳು ಸೆರಿದಂತೆ ಸಾಕಷ್ಟು ಯುವಸಮೂಹದಲ್ಲಿ ಕ್ರೀಡಾ ಆಸಕ್ತಿ ಹೊಂದಲು ಕೇಂದ್ರಿತವಾಗಿ ಹೊರಹೊಮ್ಮುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

121 ಬಾಂಗ್ಲಾದೇಶಿ ಪ್ರಜೆಗಳ ಬಂಧನ, ಮುಂದುವರೆದ ವಿಚಾರಣೆ

ಮದುವೆ ಮಂಟಪದಲ್ಲಿ ಈ ರೀತಿ ಮಾಡಿದ್ರೆ ಗಂಡುಮಕ್ಕಳು ಯಾವಾ ಧೈರ್ಯದಲ್ಲಿ ಮದುವೆ ಆಗೋದು ಹೇಳಿ

DK Shivakumar: ನ್ಯಾಷನಲ್ ಹೆರಾಲ್ಡ್ ಕೇಸ್ ನಲ್ಲಿ ಡಿಕೆ ಶಿವಕುಮಾರ್: 25 ಲಕ್ಷ ಕೊಟ್ಟಿದ್ದೆ ತಪ್ಪೇನು ಎಂದ ಡಿಸಿಎಂ

HD Kumaraswamy: ರಾಮನಗರ ಜಿಲ್ಲೆ ಹೆಸರು ಬದಲಿಸಿದ್ದರಿಂದ ಡಿಕೆಶಿ ಜಮೀನು ಬೆಲೆ ಹೆಚ್ಚಾಗಬಹುದು: ಕುಮಾರಸ್ವಾಮಿ

Mysore Sandal Soap: ವಿರೋಧದ ಬೆನ್ನಲ್ಲೇ ತಮನ್ನಾ ಆಯ್ಕೆ ಹಿಂದಿನಿ ಕಾರಣ ಬಿಚ್ಚಿಟ್ಟ ಸಚಿವ ಎಂಬಿ ಪಾಟೀಲ್‌

ಮುಂದಿನ ಸುದ್ದಿ
Show comments