Select Your Language

Notifications

webdunia
webdunia
webdunia
webdunia

ಹುಬ್ಬಳ್ಳಿ ಅಂಜಲಿ ಹತ್ಯೆ ಮಾಡಿದ್ದೇಕೆ ಎಂದು ಬಾಯ್ಬಿಟ್ಟ ಆರೋಪಿ ವಿಶ್ವ

Hubballi Anjali

Krishnaveni K

ಹುಬ್ಬಳ್ಳಿ , ಬುಧವಾರ, 22 ಮೇ 2024 (14:47 IST)
ಹುಬ್ಬಳ್ಳಿ: ಇತ್ತೀಚೆಗೆ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಪ್ರಕರಣಗಳಲ್ಲಿ ಅಂಜಲಿ ಅಂಬಿಗೇರ ಪ್ರಕರಣವೂ ಒಂದು. ಆರೋಪಿ ವಿಶ್ವನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಆತ ಕೊಲೆಗೆ ನಿಜ ಕಾರಣವೇನೆಂದು ಬಾಯ್ಬಿಟ್ಟಿದ್ದಾನೆ.

ಮೇ 15 ರಂದು ನಸುಕಿನಲ್ಲಿ ಅಂಜಲಿ ಮನೆಗೆ ನುಗ್ಗಿದ್ದ ಆರೋಪಿ ವಿಶ್ವ ಆಕೆಯ ಮೇಲೆ ಮನಬಂದಂತೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಈ ವೇಳೆ ತಡೆಯಲು ಬಂದ ಅಂಜಲಿಯ ತಂಗಿ ಮತ್ತು ಅಜ್ಜಿಯ ಮೇಲೂ ಹಲ್ಲೆ ನಡೆಸಿದ್ದಾನೆ. ಅಂಜಲಿ ಕೊಲೆ ಮಾಡಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ದಾವಣಗೆರೆಗೆ ತೆರಳುವ ರೈಲಿನಲ್ಲಿ ತಪ್ಪಿಸಿಕೊಂಡು ಹೋಗುವಾಗ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದು, ಈ ವೇಳೆ ಸಹ ಪ್ರಯಾಣಿಕರ ದರ್ಮದೇಟಿನಿಂದ ತಪ್ಪಿಸಿಕೊಳ್ಳಲು ರೈಲಿನಿಂದ ಹಾರುವಾಗ ಗಾಯ ಮಾಡಿಕೊಂಡು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.

ಅಂಜಲಿಯನ್ನು ವಿಶ್ವ ಪ್ರೀತಿಸುತ್ತಿದ್ದ. ಆಕೆಯನ್ನು ಕೊಲೆ ಮಾಡುವ ಮೊದಲು ಮೈಸೂರಿಗೆ ಬರಲು ಕರೆದಿದ್ದ. ಆದರೆ ಆಕೆ ಬರಲೊಪ್ಪಲಿಲ್ಲ ಎಂದು ಕೊಲೆ ಮಾಡಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿತ್ತು. ಇದೀಗ ಪೊಲೀಸ್ ವಿಚಾರಣೆ  ವೇಳೆ ತಾನೇಕೆ ಅಂಜಲಿಯನ್ನು ಕೊಲೆ ಮಾಡಿದೆ ಎಂಬುದನ್ನು ಬಾಯ್ಬಿಟ್ಟಿದ್ದಾನೆ.

ಕೊಲೆ ಮಾಡುವ ಮೊದಲು ಆಕೆಗೆ ಫೋನ್ ಪೇ ಮೂಲಕ 1000 ರೂ. ಖಾತೆಗೆ ಹಾಕಿದ್ದೆ. ಅದನ್ನು ಪಡೆದುಕೊಂಡು ಆಕೆ ನನ್ನ ನಂಬರ್ ಬ್ಲಾಕ್ ಮಾಡಿದ್ದಳು. ನಾನು ಬೆಳಗಿನ ಜಾವ ಆಕೆಯ ಮನೆಗೆ ಹೋಗಿ ಮೈಸೂರಿಗೆ ಹೋಗೋಣ ಬಾ ಎಂದು ಕರೆದೆ. ಆದರೆ ಆಕೆ ಬರಲೊಪ್ಪಲಿಲ್ಲ. ಆಗ ಕೋಪ ಬಂತು. ಅದಕ್ಕೇ ಚಾಕು ಹಾಕಿದೆ ಎಂದು ವಿಶ್ವ ಹೇಳಿಕೊಂಡಿದ್ದಾನೆ.

ಇನ್ನೊಂದೆಡೆ ಗಾಯಗೊಂಡಿರುವ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರೆ ಅಲ್ಲಿಯೂ ಶುಶ್ರೂಷೆ ಮಾಡುತ್ತಿದ್ದ ನರ್ಸ್ ಮೇಲೆ ದಾಳಿ ಮಾಡಲು ಯತ್ನಿಸಿದ್ದಾನೆ. ಕೊಠಡಿಯಲ್ಲಿ ಕೆಲಸ ಮಾಡುತ್ತಿದ್ದ ಆಯಾಗೆ ಧಮ್ಕಿ ಹಾಕಿದ್ದಾನೆ. ಇದರಿಂದ ಸಿ‍ಬ್ಬಂದಿ ಭಯಗೊಂಡಿದ್ದಾರೆ. ಇದರ ಬೆನ್ನಲ್ಲೇ ಆತನ ಚಿಕಿತ್ಸೆ ಪಡೆಯುತ್ತಿರುವ ಕೊಠಡಿಗೆ ಭದ್ರತೆ ಹೆಚ್ಚಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಲ್ಲಿ ʼಸ್ಮೋಕಿ ಪಾನ್‌ʼ ಸೇವಿಸಿದ ಬಾಲಕಿಯ ಹೊಟ್ಟೆಯಲ್ಲಿ ರಂಧ್ರ